ADVERTISEMENT

ದೇವನಹಳ್ಳಿ: ಶಿವ ಸ್ಮರಣೆಯಿಂದ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 15:30 IST
Last Updated 28 ಫೆಬ್ರುವರಿ 2025, 15:30 IST
ದೇವನಹಳ್ಳಿ ಕೋಡಿಮಂಚೇನಹಳ್ಳಿಯ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮಹಾಶಿವರಾತ್ರಿ ಪ್ರವಚನದಲ್ಲಿ ಭಾಗವಹಿಸಿದ್ದವರು
ದೇವನಹಳ್ಳಿ ಕೋಡಿಮಂಚೇನಹಳ್ಳಿಯ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮಹಾಶಿವರಾತ್ರಿ ಪ್ರವಚನದಲ್ಲಿ ಭಾಗವಹಿಸಿದ್ದವರು   

ದೇವನಹಳ್ಳಿ: ಪಟ್ಟಣದ ಕೋಡಿಮಂಚೇನಹಳ್ಳಿಯ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಶಿವರಾತ್ರಿ ಪ್ರವಚನ ನಡೆಯಿತು.

ಶಿವರಾತ್ರಿಯ ದಿವಸವಷ್ಟೇ ಶಿವನನ್ನು ನೆನೆಯುವುದಲ್ಲದೆ ಪ್ರತಿದಿನ ಪ್ರತಿಕ್ಷಣ ಶಿವನಾಮಸ್ಮರಣೆ ಮಾಡಿದರೆ ಶಾಂತಿ–ನೆಮ್ಮದಿ ಜೀವನ ದೊರೆಯುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಶಾಸ್ತ್ರಿ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್‌ನ ದೊಡ್ಡಬಳ್ಳಾಪುರ ತಾಲ್ಲೂಕು ಮಾಜಿ ಅಧ್ಯಕ್ಷ ಮಹಾಲಿಂಗಯ್ಯ, ವೀರಶೈವ ಸಮಾಜ ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಎಸ್‌.ರಮೇಶ್‌, ಅಖಿಲ ಭಾರತ ವೀರಶೈವ ಮಾಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿರೂಪಾಕ್ಷಯ್ಯ, ಜಿಲ್ಲಾ ನಿರ್ದೇಶಕಿ ಅಶ್ವಿನಿ.ಎಸ್, ವೀರಶೈವ ಸಮಾಜ ಸಂಘದ ತಾಲೂಕು ಉಪಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಸ್‌.ನಾಗೇಶ್, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್, ನಿರ್ದೇಶಕರಾದ ಮಲ್ಲಾರಿ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಕಾಂತರಾಜ್, ಸಮಾಜದ ಮುಖಂಡರಾದ ವೀರಭದ್ರಪ್ಪ, ಕಾಂತರಾಜು, ಚಿದಂಬರಂ, ಮುನಿರಾಜು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.