ADVERTISEMENT

ವಿಪರೀತ ಚಳಿಯಿಂದ ಅನಾರೋಗ್ಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 12:58 IST
Last Updated 8 ಜನವರಿ 2019, 12:58 IST
ವಿಜಯಪುರದ ನಾಗರಬಾವಿಯ ಬಳಿ ಮುಂಜಾನೆ ದಟ್ಟ ಮಂಜಿನಿಂದ ಕೂಡಿರುವುದು
ವಿಜಯಪುರದ ನಾಗರಬಾವಿಯ ಬಳಿ ಮುಂಜಾನೆ ದಟ್ಟ ಮಂಜಿನಿಂದ ಕೂಡಿರುವುದು   

ವಿಜಯಪುರ: ದಿನಬೆಳಗಾದರೆ ದಟ್ಟವಾಗಿ ಬೀಳುತ್ತಿರುವ ಮಂಜು, ಸಂಜೆಯಾಗುತ್ತಿದ್ದಂತೆ ಬೀಳುವ ಹಿಮದಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದಾರೆ.

ಒಂದು ತಿಂಗಳಿನಿಂದ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಜನರಿಗೆ ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬೆಳಿಗ್ಗೆ 9 ಗಂಟೆಯವರೆಗೂ ಹೊರಬರಲಾರದಂತಹ ಚಳಿ ಇಲ್ಲಿ ಕಾಣಿಸಿಕೊಂಡಿದೆ. ಇದರಿಂದ ವೃದ್ಧರಿಗೆ ಉಸಿರಾಟದಂತಹ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರು ಹೇಳಿದರು.

ಸುಮಾರು 9 ಗಂಟೆಯವರೆಗೂ ಕೊರೆಯುವ ಚಳಿ ಇರುವುದರಿಂದ ಶಾಲಾ ಮಕ್ಕಳು ಶಾಲೆಗಳಿಗೆ ಹೋಗಲಿಕ್ಕೂ ತೊಂದರೆಯಾಗುತ್ತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವುದಕ್ಕೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವರ ಆರೋಗ್ಯದಲ್ಲೂ ವ್ಯತ್ಯಾಸಗಳು ಕಾಣಿಸುತ್ತಿವೆ ಎಂದು ವಿಶ್ವನಾಥ್ ಹೇಳಿದರು.

ADVERTISEMENT

ಚಳಿ ಹೆಚ್ಚಾಗಿದ್ದರಿಂದ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು, ಚಳಿಗೆ ಧರಿಸುವಂತಹ ಸ್ವೆಟರ್, ಜರ್ಕಿನ್, ರಗ್ಗುಗಳ ಬೆಲೆ ಏರಿಕೆ ಮಾಡಿದ್ದಾರೆ. ಕೆಲ ಬೆಳೆಗಳು ರೋಗಗಳಿಗೆ ಒಳಗಾಗುತ್ತಿದ್ದು, ರೈತರು ಹೆಚ್ಚು ಔಷಧಿಗಳನ್ನು ಸಿಂಪಡಣೆ ಮಾಡುವಂತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.