ADVERTISEMENT

‘ಮನಸ್ಸನ್ನು ಹತೋಟಿಯಲ್ಲಿಡುವ ಕರಾಟೆ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 13:46 IST
Last Updated 11 ಮಾರ್ಚ್ 2019, 13:46 IST
ವಿಜಯಪುರದ ಜಿಕೆಬಿಎಂಎಸ್‌ ಶಾಲೆಯ ಆವರಣದಲ್ಲಿ ವಾರಿಯರ್ಸ್ ಟೇಕ್ವಾಂಡೊ ಅಕಾಡೆಮಿ ವತಿಯಿಂದ ನಡೆದ ಬೆಲ್ಟ್ ಎಕ್ಸಾಮ್‌ನಲ್ಲಿ ಅಕಾಡೆಮಿಯ 45 ವಿದ್ಯಾರ್ಥಿಗಳಿಗೆ ಬೆಲ್ಟ್‌ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ ವಿತರಿಸಿದರು
ವಿಜಯಪುರದ ಜಿಕೆಬಿಎಂಎಸ್‌ ಶಾಲೆಯ ಆವರಣದಲ್ಲಿ ವಾರಿಯರ್ಸ್ ಟೇಕ್ವಾಂಡೊ ಅಕಾಡೆಮಿ ವತಿಯಿಂದ ನಡೆದ ಬೆಲ್ಟ್ ಎಕ್ಸಾಮ್‌ನಲ್ಲಿ ಅಕಾಡೆಮಿಯ 45 ವಿದ್ಯಾರ್ಥಿಗಳಿಗೆ ಬೆಲ್ಟ್‌ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ ವಿತರಿಸಿದರು   

ವಿಜಯಪುರ: ಕರಾಟೆಯು ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡುವ ವಿಧಾನವನ್ನು ಕಲಿಸುತ್ತದೆ. ಇವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಜಿಕೆಬಿಎಂಎಸ್‌ ಶಾಲೆಯ ಆವರಣದಲ್ಲಿ ವಾರಿಯರ್ಸ್ ಟೇಕ್ವಾಂಡೊ ಅಕಾಡೆಮಿ ವತಿಯಿಂದ ನಡೆದ ಬೆಲ್ಟ್ ಎಕ್ಸಾಮ್‌ನಲ್ಲಿ ಅಕಾಡೆಮಿಯ 45 ವಿದ್ಯಾರ್ಥಿಗಳಿಗೆ ಬೆಲ್ಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ ಎಂದರು.

ADVERTISEMENT

ಅಕಾಡೆಮಿಯ ಮುಖ್ಯ ತರಬೇತುದಾರ ವಿ ಮುನಿಂದ್ರ ಮಾತನಾಡಿ, ಕರಾಟೆ ಮಾನಸಿಕವಾಗಿ ಸದೃಢತೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಅವರನ್ನು ಆತ್ಮಸೈರ್ಯವನ್ನೂ ಕರಾಟೆ ಹೆಚ್ಚಿಸುತ್ತದೆ ಎಂದರು.

ಎಂ. ಧನುಷ್‌ಕುಮಾರ್, ಸಿಂಧು, ನರಹರಿಪ್ರಸಾದ್, ಚೇತನ್ ಹಾಗೂ ಯಶಸ್, ನಿರಂಜನ್ ಇವರಿಗೆ ಬ್ಲ್ಯಾಕ್ ಬೆಲ್ಟ್‌ಗಳನ್ನು ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.