ADVERTISEMENT

ದೊಡ್ಡಬಳ್ಳಾಪುರ: ವಕೀಲರ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 15:45 IST
Last Updated 4 ಡಿಸೆಂಬರ್ 2023, 15:45 IST
ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು
ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು   

ದೊಡ್ಡಬಳ್ಳಾಪುರ: ರಾಜ್ಯ ಹೈಕೋರ್ಟ್‌ ಆದೇಶದಂತೆ ತಾಲ್ಲೂಕು ವಕೀಲರ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಹೆಸರ‌ನ್ನು ಸೋಮವಾರ ಚುನಾವಣಾ ಅಧಿಕಾರಿ ಎನ್‌.ಎಸ್‌.ಮುರಳಿಕೃಷ್ಣ ಅವರು ಅಧಿಕೃತವಾಗಿ ಘೋಷಿಸಿ, ಆಯ್ಕೆ ಪ್ರಮಾಣಪತ್ರ ವಿತರಣೆ ಮಾಡಿದರು.

ನಗರದ ನ್ಯಾಯಾಲಯ ಆವರಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಹಕಾರ ಸಂಘಗಳ ಸಹಾಯಕ ನೋಂದಣಿ ಅಧಿಕಾರಿ ಹಾಗೂ ವಕೀಲರ ಸಂಘದ ಆಡಳಿತ ಅಧಿಕಾರಿ ಶೀಲಾ ಅವರು, ಮತದಾರರ ಪಟ್ಟಿಯಲ್ಲಿನ ಗೊಂದಲವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಚುನಾವಣೆ ಒಂದು ವಾರದ ಹಿಂದೆಯೇ ನಡೆದಿದ್ದರು ಸಹ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿರಲಿಲ್ಲ. ಈಗ ಹೈಕೋರ್ಟ್‌ ಆದೇಶದ ನಿಯಮದಂತೆಯೇ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷರಾಗಿ ಎಂ.ರವಿ, ಉಪಾಧ್ಯಕ್ಷರಾಗಿ ಎಂ.ಆರ್‌.ಸುರೇಶ್‌, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್‌, ಖಜಾಂಚಿ ಎಂ.ಮುನಿರಾಜು, ನಿರ್ದೇಶಕರಾಗಿ ಸೈಯದ್‌ ನಾಜಿಮ್‌ ಉಲ್ಲಾ, ಬಿ.ಪ್ರವೀಣ್‌ಕುಮಾರ್‌ ಗುಪ್ತ, ಮಹಮ್ಮದ್‌ ಮಮ್ತಾಜ್‌, ಎನ್‌.ಲೀಲಾವತಿ, ಎ.ಎಸ್‌.ಚಂದೇಶ್‌ಕುಮಾರ್‌, ಎನ್‌.ಅನಿತ, ಆರ್‌.ಪ್ರಭಾಕರ್‌, ಟಿ.ಜೆ.ಶಿವಕುಮಾರ್‌, ಟಿ.ಉಮೇಶ, ಎಂ.ಮೋಹನ್‌ಕುಮಾರ್‌ ಆಯ್ಕೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.