ADVERTISEMENT

ಉತ್ಸವದಲ್ಲಿ ಸಚಿವ ಎಂಟಿಬಿ ಭಾಗಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:37 IST
Last Updated 6 ಡಿಸೆಂಬರ್ 2022, 5:37 IST
ಹೊಸಕೋಟೆಯ ಊರ ಬಾಗಿಲ ಆಂಜನೇಯ ದೇವಾಲಯದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಪ್ರಸಾದ ವಿತರಿಸಿದರು
ಹೊಸಕೋಟೆಯ ಊರ ಬಾಗಿಲ ಆಂಜನೇಯ ದೇವಾಲಯದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಪ್ರಸಾದ ವಿತರಿಸಿದರು   

ಹೊಸಕೋಟೆ: ‘ದೇವಾಲಯಗಳ ಬೀಡಾಗಿರುವ ಹೊಸಕೋಟೆಯ ಜನತೆಗೆ ಶಾಂತಿ, ನೆಮ್ಮದಿ, ಸುಖ ಸಂಪತ್ತನ್ನು ದೇವರು ದಯ ಪಾಲಿಸಲಿ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.

ನಗರದ ಪಾರ್ವತೀಪುರದ ಊರ ಬಾಗಿಲು ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನದೇವಾಲಯಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರಿಗೆ ಸಚಿವರು ಪ್ರಸಾದ ವಿತರಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್, ಉಪಾಧ್ಯಕ್ಷೆ ಸುಗುಣಾ ಮೋಹನ್, ಸದಸ್ಯರಾದ ವೆಂಕಟೇಶ್, ಅರುಣ್ ಕುಮಾರ್‌, ಕೆಆರ್‌ಬಿ ಶೋಭಾ ಶಿವಾನಂದ್, ಸೋಮಶೇಖರ್‌, ಮುಖಂಡರಾದ ಜಯಕುಮಾರ್‌, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.