
ಹೊಸಕೋಟೆ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್ಡಿ) ಗೆ ಬುಧವಾರ ನಡೆದ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಎಚ್. ಕೆ.ದೊರಸ್ವಾಮಿ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಆಡಳಿತ ಮಂಡಳಿ ನಿರ್ದೇಶಕರನ್ನು ಸಹ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷೆ ಎಸ್.ಆಶಾರಘು, ಮಾಜಿ ಅಧ್ಯಕ್ಷ ಎನ್.ಮಂಜುನಾಥ್, ನಿರ್ದೇಶಕ ಸಿ.ಮುನಿಯಪ್ಪ, ಎಲ್.ಗಂಗರಾಜು, ಎಚ್.ಎನ್ ಪಿಳ್ಳೇಗೌಡ, ಎಚ್. ಎಸ್. ಶಂಕರಪ್ಪ, ಆರ್. ಶ್ರೀಧರ್, ಎಸ್.ಆರ್ ಮಂಜುಳಾ, ಎಚ್.ಶಾಂತಮ್ಮ, ಕೆ.ಎಂ ಶ್ರೀನಿವಾಸ್, ಚಿನ್ನಪ್ಪಯ್ಯ, ಪಿ.ಮಂಜುನಾಥ್, ಎಂ.ಮುನಿರಾಜ್, ನಿರಂಜನ್, ಶಾಂತಮ್ಮ, ರಶ್ಮಿ ಬಿ.ಎಚ್, ರಂಜಿತಾ, ಮನೋಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.