ADVERTISEMENT

ಆಂಬುಲೆನ್ಸ್‌ ತೆರಳಲು ಅಡ್ಡಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 5:53 IST
Last Updated 29 ನವೆಂಬರ್ 2022, 5:53 IST
ಚನ್ನರಾಯಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ವಾಹನವು ಆಂಬುಲೆನ್ಸ್ ಹೋಗಲು ಅಡ್ಡಿಯಾಗಿತ್ತು
ಚನ್ನರಾಯಪಟ್ಟಣದಲ್ಲಿ ಪಂಚರತ್ನ ರಥಯಾತ್ರೆ ವಾಹನವು ಆಂಬುಲೆನ್ಸ್ ಹೋಗಲು ಅಡ್ಡಿಯಾಗಿತ್ತು   

ವಿಜಯಪುರ(ಬೆಂ.ಗ್ರಾಮಾಂತರ):ಚನ್ನರಾಯಪಟ್ಟಣಕ್ಕೆ ರಥಯಾತ್ರೆ ಬಂದಿದ್ದ ಹಿನ್ನೆಲೆಯಲ್ಲಿ ಪಂಚರತ್ನ ಯೋಜನೆಗಳ ಪ್ರಾತ್ಯಕ್ಷಿಕೆ ಹೊತ್ತುತಂದಿದ್ದ ವಾಹನಗಳು ರಸ್ತೆಯಲ್ಲಿ ಅಡ್ಡವಾಗಿ ನಿಂತಿದ್ದವು. ಇದರ ಪರಿಣಾಮ ರಸ್ತೆಯಲ್ಲಿ ಬಂದ ಆಂಬುಲೆನ್ಸ್ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿತು.

ಆಂಬುಲೆನ್ಸ್ ಚಾಲಕ ಸಾಕಷ್ಟು ಬಾರಿ ವಾಹನವನ್ನು ಮುನ್ನಡೆಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪೊಲೀಸರೂ ಇರಲಿಲ್ಲ. ಸ್ಥಳೀಯರು ಸಾಕಷ್ಟು ಪ್ರಯಾಸದಿಂದ ವಾಹನಗಳನ್ನು ತೆರವುಗೊಳಿಸಿ ಆಂಬುಲೆನ್ಸ್ ಹೋಗಲು ಅವಕಾಶ ಮಾಡಿಕೊಟ್ಟರು. ಚನ್ನರಾಯಪಟ್ಟಣ ಮೂಲಕ ದೇವನಹಳ್ಳಿ ಕಡೆಗೆ ಹೋಗಬೇಕಿದ್ದ ಆಂಬುಲೆನ್ಸ್ ಜನಸಂದಣಿಯಿಂದ ದಿನ್ನೂರು, ವಿಜಯಪುರದ ಮೂಲಕ ದೇವನಹಳ್ಳಿಯ ಕಡೆಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT