ADVERTISEMENT

ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 12:33 IST
Last Updated 23 ಆಗಸ್ಟ್ 2019, 12:33 IST
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಮಕ್ಕಳು
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ ಮಕ್ಕಳು   

ಕುದೂರು (ಮಾಗಡಿ): ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಗುರುವಾರ ನಡೆಯಿತು. ಹೋಬಳಿಯ ಶಾಲೆಗಳ ಮಕ್ಕಳಾದ ರಮ್ಯ, ವರಿನಾ ಸುಲ್ತನಾ, ಸಿಂಧೂ, ಐಶ್ವರ್ಯ, ಸುಮ, ಅಪ್ಪಾಜಿ, ಬಾಲಕೃಷ್ಣ, ಶ್ರೀನಿವಾಸ್‌, ಮಧು ಉತ್ತಮ ಪ್ರದರ್ಶನ ನೀಡಿದರು.

ಶ್ರೀಗಿರಿಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗೋಪಾಲ್‌ ಉದ್ಘಾಟಿಸಿದರು. ಗುರುಕುಲ ವಿದ್ಯಾ ಮಂದಿರದ ಮುಖ್ಯ ಶಿಕ್ಷಕ ಕೇಶವಮೂರ್ತಿ, ಕೆಪಿಎಸ್‌ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜರಾವ್‌, ನೌಕರರ ಸಂಘದ ಮಂಜುನಾಥ್‌, ಜಗದೀಶ್‌ ರಾಠೋಡ್‌, ಹಿರಿಯರಾದ ಕಾಂತರಾಜು, ರಮೇಶ್‌, ಶಿವಣ್ಣ, ಮಹೇಶ್‌.ಆರ್‌ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ಕೆ.ಟಿ. ವೆಂಕಟೇಶ್‌ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT