ದೇವನಹಳ್ಳಿ: ಇಲ್ಲಿನ ರಬ್ಬನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ (ಎಂ.ಪಿ.ಸಿ.ಎಸ್) ನೂತನ ಅಧ್ಯಕ್ಷರಾಗಿ ಆರ್.ಕೆ. ಅರ್ಜುನ್ ಗೌಡ, ಉಪಾಧ್ಯಕ್ಷರಾಗಿ ಬಿ.ರಾಜಣ್ಣ ಅವಿರೋಧವಾಗಿ ಆಯ್ಕೆಗೊಂಡರು.
ನಿರ್ದೇಶಕರಾದ ಆರ್.ಎಂ.ಮುನಿರಾಜು, ಕೆಂಪೇಗೌಡ, ಗುಂಡಪ್ಪ, ದೊಡ್ಡರಾಜಪ್ಪ, ಆರ್.ಎಂ.ಮಂಜುನಾಥ್, ಆರ್. ಕುಮಾರ್, ಶಾರದಮ್ಮ, ಯಶೋಧಮ್ಮ ಇದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸ್ಥಳೀಯ ಮುಖಂಡರು ಅಭಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.