ದೇವನಹಳ್ಳಿ: ಭಾರತದ ಸಂವಿಧಾನವೂ ಜಾತ್ಯತೀತ, ಸಮಾನತೆ, ಭ್ರಾತೃತ್ವ ತತ್ವದಲ್ಲಿ ರಚಿತಗೊಂಡಿದ್ದು ಎಲ್ಲಾ ಧರ್ಮದವರೂ ಒಗ್ಗಟ್ಟಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಎಎಪಿ ಮುಖಂಡ ಬಿ.ಕೆ. ಶಿವಪ್ಪ ತಿಳಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಶನಿವಾರ ಎಎಪಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೌಲಿ ಎಂ.ಎನ್., ಮೌಲಾನ ಮುಫ್ತಿ ಸಮೀರ್ ರಶದಿ, ಕ್ರಿಶ್ಚಿಯನ್ ಪಾದ್ರಿ ಅರ್ಚ್ ಬಿಷಪ್ ರೆವರೆಂಡ್ ಡಾ.ಕೆ. ರಾಮಚಂದ್ರ ಅಬ್ರಹಾಂ, ಶ್ರೀರುದ್ರಾಕ್ಷಿ ರುದ್ರಮುನಿ ಸಿದ್ದಲಿಂಗಯ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಎಎಪಿ ಗ್ರಾಮ ಸಂಪರ್ಕ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಪಕ್ಷದ ಮುಖಂಡರಾದ ಸುಹಾಸಿನಿ, ಮೀರಾ, ರತ್ನಮ್ಮ, ಲೋಕೇಶ್ ಕುಮಾರ್, ದೇವರಾಜು, ವೆಂಕಟೇಶ್, ಮಂಜುಳಾ, ಕದಿರಪ್ಪ, ದೇವರಾಜ್, ಗೋವಿಂದಸ್ವಾಮಿ, ವಿಜಯಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.