ವಿಜಯಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವಿರುವ ಗ್ರಂಥಾಲಯದಲ್ಲಿ ಬೀದಿನಾಯಿಯೊಂದು ಕೊಠಡಿಯೊಳಗೆ ಇರುವುದನ್ನು ಗಮನಿಸದೆ ಬಾಗಿಲು ಮುಚ್ಚಿ ಹೋಗಲಾಗಿತ್ತು.
‘ಗ್ರಂಥಪಾಲಕರು ಒಳಗೆ ಬೀದಿನಾಯಿ ಇರುವುದನ್ನು ಗಮನಿಸದೆ ಗ್ರಂಥಾಲಯದ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ನಾಯಿ ಕಿಟಕಿಯಲ್ಲಿ ಇಣುಕುತ್ತಾ ಹೊರಬರಲು ದಾರಿ ಹುಡುಕುತ್ತಿತ್ತು. ಗ್ರಂಥಪಾಲಕರು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ಇದು ಮತ್ತೊಮ್ಮೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕು’ ಸ್ಥಳೀಯ ನಿವಾಸಿ ಹರೀಶ್ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.