ADVERTISEMENT

ಹೊಸಕೋಟೆ: ಟೊಮೆಟೊ, ತರಕಾರಿ ಟ್ರ್ಯಾಕ್ಟರ್‌ ಕದ್ದೊಯ್ಯುತ್ತಿದ್ದ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 6:22 IST
Last Updated 2 ಆಗಸ್ಟ್ 2023, 6:22 IST
ಹೊಸಕೋಟೆ ಪೊಲೀಸರು ವಶಪಡಿಸಿಕೊಂಡ ಟ್ರ್ಯಾಕ್ಟರ್‌ಗಳು
ಹೊಸಕೋಟೆ ಪೊಲೀಸರು ವಶಪಡಿಸಿಕೊಂಡ ಟ್ರ್ಯಾಕ್ಟರ್‌ಗಳು   

ಹೊಸಕೋಟೆ: ಮಾರುಕಟ್ಟೆಗೆ ಟೊಮೆಟೊ ಮತ್ತು ತರಕಾರಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು ಹೊಸಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಕೋಲಾರದ ಶಿವಾನಂದ ಹಾಗೂ ಆನಂದ ಬಂಧಿತರು. ಬಂಧಿತರಿಂದ ಸುಮಾರು 12 ಟ್ರ್ಯಾಕ್ಟರ್‌ ವಶಪಡಿಸಿಕೊಳ್ಳಲಾಗಿದೆ.

ಬೆಳೆ ಕಟಾವಿಗೆ ಬಂದ ತೋಟಗಳ ಮೇಲೆ ಕಣ್ಣಿಡುತ್ತಿದ್ದ ಈ ಇಬ್ಬರೂ ಲೋಡ್‌ ಮಾಡಿಟ್ಟಿರುತ್ತಿದ್ದ ಟ್ರ್ಯಾಕ್ಟರ್‌ ಸಮೇತ ಪರಾರಿಯಾಗುತ್ತಿದ್ದರು. ಒಂದು ವರ್ಷದಿಂದ ಕೋಲಾರ, ಚಿಂತಾಮಣಿ, ಹೊಸಕೋಟೆ ಭಾಗದಲ್ಲಿ ನಡೆಯುತ್ತಿದ್ದ ಈ ಪ್ರಕರಣ ರೈತರ ನಿದ್ದೆಗೆಡಿಸಿದ್ದವು. ಪೊಲೀಸರಿಗೂ ತಲೆನೋವಾಗಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.