ADVERTISEMENT

ಲಾರಿ, ಕಾರು ನಡುವೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 2:23 IST
Last Updated 23 ಮಾರ್ಚ್ 2021, 2:23 IST
ಅಪಘಾತದಲ್ಲಿ ಮುಗುಚಿ ಬಿದ್ದಿರುವ ಟಿಪ್ಪರ್ ಲಾರಿ
ಅಪಘಾತದಲ್ಲಿ ಮುಗುಚಿ ಬಿದ್ದಿರುವ ಟಿಪ್ಪರ್ ಲಾರಿ   

ಆನೇಕಲ್ : ಟಿಪ್ಪರ್‌ ಲಾರಿಯೊಂದು ಕಾರಿನ ಮೇಲೆ ಹರಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7 ಯಡವನಹಳ್ಳಿ ಗೇಟ್‌ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಆಂಧ್ರಪ್ರದೇಶ ಮೂಲದ ಪವನ್‌(44) ಮತ್ತು ತಮಿಳುನಾಡಿನ ಜಗದೀಶ್‌(38) ಎಂದು ಗುರುತಿಸಲಾಗಿದೆ. ಇಬ್ಬರೂ ಹೈದರಾಬಾದ್‌ ಮೂಲದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಚೆನ್ನೈನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಬೆಳಿಗ್ಗೆ 6.30ರ ಸುಮಾರಿನಲ್ಲಿ ಯಡವನಹಳ್ಳಿ ಗೇಟ್‌ ಬಳಿ ಟಿಪ್ಪರ್‌ ಲಾರಿಯೊಂದು ಕಾರಿನ ಮೇಲೆ ಹರಿದಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌ ತಿಳಿಸಿದರು.

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.