ADVERTISEMENT

ಕಾಲುವೆಗಳಲ್ಲಿ ಗಿಡಗಂಟಿಗಳು...

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 8:30 IST
Last Updated 9 ಡಿಸೆಂಬರ್ 2017, 8:30 IST
ಸವದತ್ತಿಯ ಹೊಸವಾಳ ಹಾಗೂ ಗೊರವನಕೊಳ್ಳ ವ್ಯಾಪ್ತಿಯಲ್ಲಿರುವ ಕಾಲುವೆಯ ಸ್ಥಿತಿಯನ್ನು ರೈತ ಕಿರಣ ಇನಾಮದಾರ ತೋರಿಸಿದರು
ಸವದತ್ತಿಯ ಹೊಸವಾಳ ಹಾಗೂ ಗೊರವನಕೊಳ್ಳ ವ್ಯಾಪ್ತಿಯಲ್ಲಿರುವ ಕಾಲುವೆಯ ಸ್ಥಿತಿಯನ್ನು ರೈತ ಕಿರಣ ಇನಾಮದಾರ ತೋರಿಸಿದರು   

ಸವದತ್ತಿ: ತಾಲ್ಲೂಕಿನ ಹೊಸವಾಳ ಹಾಗೂ ಗೊರವನಕೊಳ್ಳ ವ್ಯಾಪ್ತಿಯ 2ನೇ ಉಪ ಕಾಲುವೆಗಳು ಸಂಪೂರ್ಣ ಹದಗೆಟ್ಟಿವೆ. ಗಿಡಗಳು ಬೆಳೆದಿದ್ದು, ನೀರು ಸಲಿಸಾಗಿ ಹರಿಯದೇ ಇರುವುದರಿಂದ ಕೊನೆಯ ಭಾಗದ ರೈತರು ಕಂಗಾಲಾಗಿದ್ದಾರೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಾಲುವೆಗಳು ಈಗಾಗಲೇ ಕಿತ್ತು ಹೋಗಿವೆ. ಇಡೀ ಕಾಲುವೆ ತುಂಬ  ಮಣ್ಣು ತುಂಬಿದೆ. ಮುಳ್ಳಿನ ಗಿಡಗಳು ಬೆಳೆದಿವೆ. ಕಾಲುವೆ ಸ್ವಚ್ಛಗೊಳಿಸದೇ ಅವಸರದಿಂದ ಕಾಲುವೆಗೆ ನೀರು ಹರಿಸಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದು ರೈತರು ದೂರಿದ್ದಾರೆ.

2011–12ನೇ ಸಾಲಿನಲ್ಲಿ ₹40 ಲಕ್ಷ ಹಣದಲ್ಲಿ ನಿರ್ಮಾಣವಾದ ಕಾಲುವೆಗಳು ಕಳಪೆ ಕಾಮಗಾರಿಯಿಂದಾಗಿ ಹಾಳಾಗಿವೆ. ಅದನ್ನು ಸ್ವಚ್ಛಗೊಳಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಗೊರವನಕೊಳ್ಳದ ರೈತ ಕಿರಣ ಇನಾಮದಾರ ತಿಳಿಸಿದರು.

ADVERTISEMENT

ಇನ್ನಾದರೂ ಕಾಲುವೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ರೈತರ ಒಕ್ಕೊರಲ ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.