ADVERTISEMENT

ಬೆಲೆ ಕಳೆದುಕೊಂಡ ಬದನೆ ಕಾಯಿ ಬೀದಿ ಪಾಲು!

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 5:45 IST
Last Updated 30 ಮಾರ್ಚ್ 2018, 5:45 IST

ಸವದತ್ತಿ: ರೈತರು ತಿಂಗಳುಗಟ್ಟಲೆ ಬೆಳೆದ ಬದನೆಕಾಯಿಗೆ ಬೆಲೆ ಸಿಗದೇ ಹೋಗಿದ್ದರಿಂದ ಸಂತೆಯಲ್ಲಿ ಮಾರಾಟಕ್ಕೆ ತಂದ ಬದನೆಕಾಯಿಯನ್ನು ಸವದತ್ತಿಯ ಬುಧವಾರ ಸಂತೆಯ ಆವರಣದಲ್ಲಿ ರೈತರು ಬಿಟ್ಟು ಹೋದರು.

ಆವರಣದಲ್ಲಿದ್ದ ಬಿಡಾದಿ ದನಗಳಿಗೆ ಬದನೆಕಾಯಿ ಆಹಾರವಾಯಿತು. ಒಂದು ಪುಟ್ಟಿ ಬದನೆಕಾಯಿಗೆ ₹ 20 ಸಿಗದಿದ್ದಾಗ ಬೆಳೆ ಬೆಳೆದ ರೈತರು ಕಂಗಾಲಾಗಿ ಹೋದರು.‘ರೈತರು ಬಿತ್ತುವ ವೇಳೆಯಲ್ಲಿ ಬದನೆಗೆ ಒಳ್ಳೇ ಬೆಲೆ ಇತ್ತು, ಈಗ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕು’ ಎಂದು ಸವದತ್ತಿಯ ಹಿರಿಯ ನಾಗರೀಕ ಬಸವರಾಜ ಕಾರದಗಿ ‘ಪ್ರಜಾವಾಣಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT