ADVERTISEMENT

ಮಕ್ಕಳೆಸೆದು ಹರಕೆ ತೀರಿಸಿದರು..

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 7:09 IST
Last Updated 10 ಫೆಬ್ರುವರಿ 2014, 7:09 IST
ಮೂಡಲಗಿ ಸಮೀಪದ ಕುಲಿಗೋಡ ಗ್ರಾಮದಲ್ಲಿ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ದೇವಸ್ಥಾನದ ಮೇಲಿನಿಂದ ಮಕ್ಕಳನ್ನು ಎಸೆಯುವ ಮೂಲಕ ಹರಕೆ ತೀರಿಸುತ್ತಿರುವುದು.
ಮೂಡಲಗಿ ಸಮೀಪದ ಕುಲಿಗೋಡ ಗ್ರಾಮದಲ್ಲಿ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ದೇವಸ್ಥಾನದ ಮೇಲಿನಿಂದ ಮಕ್ಕಳನ್ನು ಎಸೆಯುವ ಮೂಲಕ ಹರಕೆ ತೀರಿಸುತ್ತಿರುವುದು.   

ಮೂಡಲಗಿ: ಸಮೀಪದ ಕುಲಿಗೋಡ ಗ್ರಾಮದ ಬಲಭೀಮ ದೇವರ ಕಾರ್ತಿಕೋತ್ಸವದ ಅಂಗವಾಗಿ ಭಾನವಾರ ದೇವಸ್ಥಾನದ ಮೇಲಿಂದ ಮಕ್ಕಳನ್ನು ಎಸೆಯುವ ಹರಕೆ ನಡೆಯಿತು.

ನಂಬಿದ ಭಕ್ತರನ್ನು ಕೈಬಿಡಲಾರ ಎನ್ನುವ ಪ್ರತೀತಿಯನ್ನು ಹೊಂದಿರುವ ಇಲ್ಲಿಯ ಬಲಭೀಮ ದೇವರಿಗೆ ದೇವಸ್ಥಾನದ ಮೇಲಿಂದ 5 ವರ್ಷದ ಒಳಗಿನ ಮಕ್ಕಳನ್ನು ಹಾರಿಸುವ ಹರಕೆಯನ್ನು ಹೊರುತ್ತಾರೆ.

ಗಂಡು ಮಕ್ಕಳಿಗಾಗಿ ಪರಿತಪಿಸುವವರು ಗಂಡು ಮಗುವಿಗಾಗಿ, ಸಂತಾನ ಇಲ್ಲದವರು ಸಂತಾನ ಭಾಗ್ಯಕ್ಕಾಗಿ ಮನೆಯಲ್ಲಿ ಕಲ್ಯಾಣ ಕೆಲಸ, ಆಸ್ತಿ ಖರೀದಿ ಹೀಗೆ ವಿವಿಧ ಬೇಡಿಕೆಗಳ ಈಡೇರಿಕಿಗಾಗಿ ಮಕ್ಕಳನ್ನು ಹಾರಿಸುವ ಭಕ್ತಿಯ ಹರಕೆಯನ್ನು ಹೊರಲಾಗುತ್ತದೆ.

25 ಅಡಿ ಎತ್ತರದ ದೇವಸ್ಥಾನದ ಮೇಲಿಂದ ಕೆಳಗೆ ಹಿಡಿದಿರುವ ಬಟ್ಟೆಯಲ್ಲಿ ಮಕ್ಕಳನ್ನು ಹಾರಿಸುವರು. ಹೀಗೆ ಹಾರಿಸುವ ಮಕ್ಕಳು ಚುರುಕು, ಸದೃಢ ಮತ್ತು ಬುದ್ಧಿವಂತರಾಗಿ ಬೆಳೆಯವರು ಎಂದು ನಂಬಿಕೆ ಇದೆ. ಹೀಗಾಗಿ ಕುಲಿಗೋಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವಾರ ಗ್ರಾಮಗಳಲ್ಲಿ ಹುಟ್ಟುವ ಮಕ್ಕಳನ್ನು ಜಾತಿ, ಧರ್ಮ ಹಾಗೂ ಮೇಲು ಕೀಳು ಎನ್ನದೆ ಭಾವೈಕ್ಯತೆಯ ನಲೆಯಲ್ಲಿ ಕಾರ್ತಿಕೋತ್ಸವ ಆಚರಿಸುವರು.  ಭಾನುವಾರ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಹರಕೆ ತೀರಿಸಿಕೊಂಡರು.

ಕಾರ್ತಿಕೋತ್ಸವದ ಪ್ರಮುಖವಾದ ಪಲ್ಲಕ್ಕಿ ಉತ್ಸವವು ವಾದ್ಯ ಮೇಳಗಳೊಂದಿಗೆ ಜರುಗಿತು. ಮಹಾಮಂಗಳಾರತಿ ಮತ್ತು ಸಂಜೆ ಶ್ರೀರಾಮ ಜಪದೊಂದಿಗೆ ಕಾರ್ತಿಕೋತ್ಸವವು ಮಂಗಳವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.