ADVERTISEMENT

ಮಳೆ–ಗಾಳಿಗೆ ಹಾರಿದ ಚಾವಣಿ: ಹಾನಿ

​ಪ್ರಜಾವಾಣಿ ವಾರ್ತೆ
Published 14 ಮೇ 2018, 6:22 IST
Last Updated 14 ಮೇ 2018, 6:22 IST
ಮಳೆ ಗಾಳಿಗೆ ಮುಗಳಖೋಡದಲ್ಲಿ ಮನೆಯೊಂದರ ಚಾವಣಿ ಹಾರಿ ಹೋಗಿದೆ
ಮಳೆ ಗಾಳಿಗೆ ಮುಗಳಖೋಡದಲ್ಲಿ ಮನೆಯೊಂದರ ಚಾವಣಿ ಹಾರಿ ಹೋಗಿದೆ   

ಮುಗಳಖೋಡ: ಈಚೆಗೆ ಸುರಿದ ಮಳೆ– ಗಾಳಿಯಿಂದ ಮುಗಳಖೋಡ ಕ್ರಾಸ್ ಹತ್ತಿರದ ಶ್ರೀಪಾಲ ಬಾಬನ್ನವರ ಅವರ ಮನೆಯ ಚಾವಣಿ ಹಾರಿಹೋಗಿ ಹಾನಿಯಾಗಿದೆ. ಚಾವಣಿ ಹಾರಿದ್ದರಿಂದ ಮನೆಯಲ್ಲಿನ ಧಾನ್ಯಗಳೆಲ್ಲ ತೊಯ್ದು ಹಾಳಾಗಿವೆ. ಟಿವಿ ಮತ್ತಿತರ ಎಲೆಕ್ಟ್ರಿಕ್ ವಸ್ತುಗಳು ಕೆಟ್ಟು ಹೋಗಿವೆ. ಮಕ್ಕಳ ಶಾಲಾ ಸಾಮಗ್ರಿಗಳು ಮತ್ತು ಗೃಹ ಬಳಕೆಯ ವಸ್ತುಗಳು ಹಾಳಾಗಿದ್ದು, ಮನೆ ಗೋಡೆಗಳು ಶಿಥಿಲಗೊಂಡಿವೆ.

ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT