ಸವದತ್ತಿ: ಸವದತ್ತಿ ಯಲ್ಲಮ್ಮ ಮತ ಕ್ಷೇತ್ರದ ಶಾಸಕನಾಗಿ ಮೂರನೇ ಬಾರಿ ದಾಖಲೆ ಬರೆದ ಆನಂದ ಮಾಮನಿ ಅವರನ್ನು ಅಭಿಮಾನಿಗಳು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆದೊಯ್ದರು.
ಗೆಲುವಿನ ಮಾಲೆ ಧರಿಸಿದ ತಕ್ಷಣ ಮನೆ ದೇವರು ಜಾಲಿಕಟ್ಟಿ ಬಸವಣ್ಣನ ದರ್ಶನ ಪಡದು ಪಟ್ಟಣಕ್ಕೆ ಆಗಮಿಸು
ತ್ತಿದ್ದಂತೆ, ಆನಿಅಗಸಿ, ಗಾಂಧಿಚೌಕ, ಎಸ್.ಎಲ್.ಓ ಕ್ರಾಸ್ ಮಾರ್ಗವಾಗಿ ಮೆರವಣಿಗೆ ಮಾಡಲಾಯಿತು.
ನಂತರ ಮಾತನಾಡಿದ ಶಾಸಕ ಆನಂದ ಮಾಮನಿ, ‘ನಿಮ್ಮೆಲ್ಲರ ಅಭಿಮಾನಕ್ಕೆ ಶರಣು. ನಾನು ಶಾಸಕನಾಗುವದಕ್ಕಿಂತ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡುವ ಮೂಲಕ ಇಡೀ ಕ್ಷೇತ್ರದಲ್ಲಿ ದಾಖಲೆ ಸೃಷ್ಟಿಸಿದ್ದಿರಿ. ನಿಮಗೆ ಋಣಿಯಾಗಿರುವೆ’ ಎಂದರು.
ಶಿವಾನಂದ ಪಟ್ಟಣಶೆಟ್ಟಿ, ಮೌಲಾಸಾಬ ತಬ್ಬಲಜಿ, ಪ್ರಭು ಪ್ರಭುನವರ, ಉಮೇಶ ಕೋರಿಕೊಪ್ಪ, ದೀಪಕ ಜಾನವೇಕರ, ಶಿವಾನಂದ ಪಟ್ಟಣಶೆಟ್ಟಿ, ಸುಭಾಸ ರಜಪೂತ, ಎಸ್.ಸಿ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರು ಮುಂತಾದವರು ಪಾಲ್ಗೊಂಡಿದ್ದರು.
ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ, ಗುಲಾಲ ಎರಚಿ, ಕುಣಿದು ಕುಪ್ಪಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.