ADVERTISEMENT

ಒಂದೇ ದಿನ 12 ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 3 ಮೇ 2021, 16:30 IST
Last Updated 3 ಮೇ 2021, 16:30 IST

ಬೆಳಗಾವಿ: ಕೋವಿಡ್ ಹಾಗೂ ವಿವಿಧ ಕಾರಣಗಳಿಂದ ಸಾವಿನ ಸರಣಿ ಮುಂದುವರಿದಿದೆ.

ಕೋವಿಡ್ ಮತ್ತು ತೀವ್ರ ಉಸಿರಾಟದ ತೊಂದರೆ ಮತ್ತಿತರ ಕಾರಣದಿಂದ ಮೃತರಾದ 12 ಮಂದಿಯ ಅಂತ್ಯಕ್ರಿಯೆ ಇಲ್ಲಿನ ಸದಾಶಿವನಗರ ಸ್ಮಶಾನದಲ್ಲಿ ಸೋಮವಾರ ಏಕಕಾಲಕ್ಕೆ ನೆರವೇರಿತು. ಬಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಸಾವು ಸಂಭವಿಸಿತ್ತು.

‘ಎಲ್ಲರೂ ಕೋವಿಡ್‌ನಿಂದ ಮೃತಪಟ್ಟಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೋವಿಡ್ ಬುಲೆಟಿನ್‌ನಲ್ಲಿ ‘ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ನಿಂದ ಮರಣ ಸಂಭವಿಸಿಲ್ಲ’ ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.