ADVERTISEMENT

ಬೆಳಗಾವಿ ಜಿಲ್ಲೆಯ ನಂದಗಡ ಬಳಿ ರಸ್ತೆ ಅಪಘಾತ; ಬಾಗಲಕೋಟೆಯ ಪತ್ರಕರ್ತ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 5:31 IST
Last Updated 14 ಜನವರಿ 2018, 5:31 IST
ಬೆಳಗಾವಿ ಜಿಲ್ಲೆಯ ನಂದಗಡ ಬಳಿ ರಸ್ತೆ ಅಪಘಾತ; ಬಾಗಲಕೋಟೆಯ ಪತ್ರಕರ್ತ ಸಾವು
ಬೆಳಗಾವಿ ಜಿಲ್ಲೆಯ ನಂದಗಡ ಬಳಿ ರಸ್ತೆ ಅಪಘಾತ; ಬಾಗಲಕೋಟೆಯ ಪತ್ರಕರ್ತ ಸಾವು   

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಬಳಿ ಭಾನುವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಗಲಕೋಟೆಯ ಪತ್ರಕರ್ತ ವಿರೇಶ ಹಿರೇಮಠ ಸಾವಿಗೀಡಾಗಿದ್ದಾರೆ.

ಅಪಘಾತದಲ್ಲಿ ಪತ್ನಿ ಗೌರಿ, ಕಾರು ಚಾಲಕ ಸುನೀಲ್‌ಗೆ ಗಂಭೀರ ಗಾಯಗಳಾಗಿವೆ. ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂದಿರುಗುವಾಗ ನಂದಗಡದ ಬಳಿ ಕಾರು ಮರಕ್ಕೆ ರಭಸದಿಂದ ಗುದ್ದಿದೆ.

ಧಾರವಾಡದ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ನಿ ಹಾಗೂ ಕಾರು ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.