ಬೆಳಗಾವಿ: ಅಕ್ಕತಂಗೇರಹಾಳ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಮುಖಂಡ ಬಸನಗೌಡ ಹೊಳೆಯಾಚಿ ಮಾತನಾಡಿ, ‘ನಮ್ಮ ಗ್ರಾಮ ಕೃಷಿ ಅವಲಂಬಿತವಾಗಿದೆ. ಪಟ್ಟಣವಾದರೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ. ರೈತರ ಮತ್ತು ಬಡವರ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಮೊದಲಾದಶೈಕ್ಷಣಿಕ ಸೌಲಭ್ಯಗಳು ದೊರೆಯುವುದಿಲ್ಲ. ಇದರಿಂದ ಅವರ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಪ್ರಸ್ತಾವ ಕೈಬಿಟ್ಟು ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಶಿವಾನಂದ ಕರಲಿಂಗಣ್ಣವರ, ಸದಸ್ಯರಾದ ಚನಗೌಡ ಪಾಟೀಲ, ರಾಜಕುಮಾರ ಪಾಟೀಲ, ಶಂಕರ ಬೆಣ್ಣಿ, ಅನ್ನಪ್ಪಾ ನೇಸರಗಿ, ಅಡಿವೇಶ ಮರಲಿಂಗಣ್ಣವರ, ಸಂಜು ಮರಲಿಂಗಣ್ಣವರ, ಕೆ.ಜಿ. ಪಾಟೀಲ, ಸಿಂಗಪ್ಪ ಪಾಟೀಲ, ಬಸವಣ್ಣಿ ಬೆಣ್ಣಿ, ಸೋಮಲಿಂಗ ಹೊಳೆಯಾಚಿ, ಬಸು ಹೆಬ್ಬಾಳ, ಲಿಂಗನಗೌಡ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.