ADVERTISEMENT

ಕುಸಿದ ರಸ್ತೆ: ತಪ್ಪಿದ ಭಾರಿ ಅನಾಹುತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 7:39 IST
Last Updated 21 ಅಕ್ಟೋಬರ್ 2019, 7:39 IST
   

ಬೆಳಗಾವಿ: ನಗರದಿಂದ ಹುಕ್ಕೇರಿ ತಾಲ್ಲೂಕು ಪಣಗುತ್ತಿ ಗ್ರಾಮಕ್ಕೆ ಸೋಮವಾರ ತೆರಳುತ್ತಿದ್ದ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್‌ ತಾಲ್ಲೂಕಿನ ಹೊಸ ವಂಟಮೂರಿ ಬಳಿ ರಸ್ತೆ ಕುಸಿದು ಸಿಲುಕಿಕೊಂಡಿದೆ.

ಭೂ ಕುಸಿತದಿಂದ ಬಸ್‌ನ ಮುಂಭಾಗ ಭಾಗಶಃ ಭೂಮಿ ಒಳಗೆ ಸೇರಿಕೊಂಡಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಕೂಡಲೇ ಕೆಳಗಿಳಿದಿದ್ದಾರೆ.

ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪ್ರಾಣ ಹಾನಿ ಸಂಭವಿಸಿಲ್ಲ. ರಸ್ತೆ ಏಕಾಏಕಿ ಕುಸಿದಿದ್ದರಿಂದ ಈ ಅನಾಹುತ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.