ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಉತ್ತಮ ಮಳೆ ಸುರಿಯಿತು.
ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ, ಗುರುವಾರ ಬೆಳಿಗ್ಗೆಯಿಂದಲೇ ಸುರಿಯಲು ಆರಂಭಿಸಿದೆ.
ಬೈಲಹೊಂಗಲ ಪಟ್ಟಣದಲ್ಲಿ ಮಳೆಯ ಆರ್ಭಟಕ್ಕೆ ಮನೆಯೊಂದು ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೌಜಲಗಿ ಪಟ್ಟಣದಲ್ಲಿಯೂ ಗುರುವಾರ ನಸುಕಿನಿಂದಲೇ ಗುಡುಗು ಸಹಿತ ಮಳೆ ಆರ್ಭಟ ಶುರುವಾಯಿತು.
ಹಿರೇಬಾಗೇವಾಡಿ, ಮುನವಳ್ಳಿ, ಮೂಡಲಗಿ, ಸವದತ್ತಿ, ಚಿಕ್ಕೋಡಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳ್ಳಿಗಳಲ್ಲೂ ಮಳೆಯಾಗಿದೆ.
ಹೆಚ್ಚಿದ ನದಿ ನೀರಿನ ಮಟ್ಟ:
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 30 ಸಾವಿರ ಕ್ಯುಸೆಕ್ ಹಾಗೂ ದೂಧಗಂಗಾ ನದಿಯಲ್ಲಿ 2047 ಕ್ಯುಸೆಕ್ ನೀರು ಸೇರಿ ಕೃಷ್ಣಾ ನದಿಗೆ ಗುರುವಾರ ಬೆಳಿಗ್ಗೆ 8ರಿಂದ 34,765 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.