ಬೆಳಗಾವಿ: ಇಲ್ಲಿನ ವಡಗಾವಿಯಲ್ಲಿ ಶುಕ್ರವಾರದಿಂದ (ಜೂನ್ 12) ಆರಂಭಗೊಳ್ಳಲಿರುವ ಗ್ರಾಮದೇವತೆ ಮಂಗಾಯಿ ಜಾತ್ರಾ ಮಹೋತ್ಸವವನ್ನುಕೊರೊನಾ ಸೋಂಕಿನ ಭೀತಿಯಿಂದಾಗಿ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಂಚ ಮಂಡಳಿ ತಿಳಿಸಿದೆ.
‘ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಅಂತರ ಕಾಯ್ದುಕೊಂಡು ದೇವಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಹೇಳಿದೆ.
ಮಂಡಳಿಯ ಶಶಿಕಾಂತ ಚವಾಣ, ಅನಂತ ಚವಾಣ ಪಾಟೀಲ, ವಿನಾಯಕ ಚವಾಣ ಪಾಟೀಲ, ಯೋಗೇಶ ಪಾಟೀಲ ಭಾಗವಹಿಸಿದ್ದರು.
ಹಿಂದಿನ ವರ್ಷಗಳಲ್ಲಿ ಈ ಜಾತ್ರೆಗೆ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.