ಬೆಳಗಾವಿ: ಜಿಲ್ಲಾಡಳಿತದಿಂದ ಭಗೀರಥ ಮಹರ್ಷಿ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಕಾರ್ಯಕ್ರಮ ನಡೆಯಿತು.
ಉಪ್ಪಾರ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಉಪ್ಪಾರ, ಸಮಾಜದ ಕಾರ್ಯದರ್ಶಿಗಳಾದ ಬಿ.ಪಿ. ಮೇಲಮಟ್ಟಿ, ಹನುಮಂತ ರಾಜಪ್ಪನವರ, ಮಂಜುನಾಥ ರಾಜಪ್ಪನವರ, ಸಂಘದ ಕಾನೂನು ಸಲಹೆಗಾರ ಎಂ.ಡಿ. ಕೀಲಾರೆ, ಸಂಘದ ಖಜಾಂಚಿ ಬಲರಾಜ ಮಳೆಪ್ಪಗೋಳ, ಮುಖಂಡರಾದ ಲಕ್ಷ್ಮಣ ಗಾಟೀನ, ಪ್ರಭಾಕರ ಉಪ್ಪಾರ, ಚಮದ್ರಶೇಖರ ಅಳಗೋಡಿ, ಸಿದ್ದಪ್ಪ ಮದಲಬಾವಿ, ಸರೋಜಿನಿ ಉಪ್ಪಾರ, ಉಮಾ ಉಪ್ಪಾರ, ವಿನಾ ಕಿಡದಾಳೆ, ಕೀರ್ತಿ ಕೀಲಾರೆ, ಎಸ್.ಬಿ. ಕಂಕಣವಾಡಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.