ಬೆಳಗಾವಿ: ಇಲ್ಲಿನ ಯಳ್ಳೂರು– ಸುಳಗಾ ರಸ್ತೆಯ ಮಧ್ಯೆ ಬೈಕ್ ಸವಾರನೊಬ್ಬ ಮಂಗಳವಾರ ಬೆಳಿಗ್ಗೆ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ.
ಮೃತ ವ್ಯಕ್ತಿಯನ್ನು ಯಳ್ಳೂರಿನ ಕಿರಾಣಿ ಅಂಗಡಿ ವ್ಯಾಪಾರಸ್ಥ ವೈಜು ನಾಗಪ್ಪ ಬುರ್ಲಕಟ್ಟಿ (50) ಎಂದು ಗುರುತಿಸಲಾಗಿದೆ. ಅಂಗಡಿಗೆ ಸಾಮಾನುಗಳನ್ನು ತರಲು ಇವರು ಬೆಳಿಗ್ಗೆ ಬೈಕ್ ಮೇಲೆ ಬೆಳಗಾವಿಗೆ ಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.