ಬೆಳಗಾವಿ: ಇಲ್ಲಿನ ಶಾಹೂನಗರದ ಕೊನೆಯ ಬಸ್ ನಿಲ್ದಾಣದ ಸಮೀಪ ಅಪಾರ್ಟ್ಮೆಂಟಿನ ಗ್ಯಾಲರಿಗೆ ನೇತುಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಗುರುವಾರ ಪತ್ತೆಯಾಗಿದೆ.
ಶಿವಾಜಿ ಟಿ. ಭಿರ್ಜೆ (35) ಸಾವಿಗೀಡಾದವರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದೆ. ತನಿಖೆ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ದೊರೆತ ಅಪಾರ್ಟ್ಮೆಂಟಿನಲ್ಲೇ ಈ ವ್ಯಕ್ತಿ ಕುಟುಂಬ ಸಮೇತ ಹಲವು ವರ್ಷಗಳಿಂದ ಬಾಡಿಗೆ ಕರಾರಿನ ಮೇಲೆ ವಾಸವಾಗಿದ್ದರು.
ಗುರುವಾರ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರು ವ್ಯಕ್ತಿಯ ಶವ ನೇತಾಡುವುದನ್ನು ಕಂಡು ಹೌಹಾರಿದರು. ಬಳಿಕವೇ ಅವರ ಕುಟುಂಬಕ್ಕೆ ಗೊತ್ತಾಯಿತು. ಸ್ಥಳದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.
ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.