ಚಚಡಿ (ಬೆಳಗಾವಿ ಜಿಲ್ಲೆ): ಗ್ರಾಮದ ಹೊರವಲಯದಲ್ಲಿ, ತಾತನೊಂದಿಗೆ ಭಾನುವಾರ ಈಜು ಕಲಿಯಲು ಹೋದ ಎಂಟು ವರ್ಷದ ಬಾಲಕ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಗ್ರಾಮದ ಪೇಟೆಬಸವಣ್ಣ ಓಣಿಯ ನಿವಾಸಿ ಮಂಜುನಾಥ ಗಾಣಗಿ ಅವರ ಪುತ್ರ ಸಿದ್ಧಾರೂಢ (8) ಮೃತಪಟ್ಟವ.
ಭಾನುವಾರ ಶಾಲೆಗೆ ರಜೆ ಇದ್ದುದರಿಂದ ತಾತ ಬಾಲಕನನ್ನು ಕರೆದುಕೊಂಡು ಊರ ಹೊರಗಿನ ಬಾವಿಯಲ್ಲಿ ಈಜು ಕಲಿಸಲು ಹೋಗಿದ್ದರು. ಬಾಲಕನ ಬೆನ್ನಿಗೆ ಪ್ಲಾಸ್ಟಿಕ್ ಡಬ್ಬ ಕಟ್ಟಿ ನೀರಿಗೆ ಇಳಿಸಿದ್ದರು. ಈಜುವಾಗಲೇ ಡಬ್ಬಿ ಕಳಚಿದ್ದರಿಂದ ಬಾಲಕ ನೀರಿನಲ್ಲಿ ಮುಳುಗಿದ. ಆದರೆ, ದಡದಲ್ಲಿ ಕುಳಿತಿದ್ದ ತಾತನಿಗೆ ಇದು ಬೇಗ ಕಾಣಿಸಲಿಲ್ಲ. ಕೆಲವು ನಿಮಿಷದ ನಂತರ ವಿಷಯ ಗೊತ್ತಾಯಿತು. ಅವರು ಕೂಗಾಡಿ ಹತ್ತಿರದಲ್ಲಿದ್ದ ಜನರನ್ನು ಕರೆದರು. ಈಜುಗಾರರು ಬಾವಿಗೆ ಜಿಗಿದು ಬಾಲಕನನ್ನು ಹೊರತಂದರು. ಆದರೆ, ಅಷ್ಟರೊಳಗೆ ಬಾಲಕ ಕೊನೆಯುಸಿರೆಳೆದಿದ್ದ.
ಚಚಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.