ಅಥಣಿ (ಬೆಳಗಾವಿ ಜಿಲ್ಲೆ): ಕೃಷ್ಣಾ ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎಮ್ಮೆಯನ್ನು ಯುವಕರೊಬ್ಬರು ಪ್ರಾಣದ ಹಂಗು ತೊರೆದು ಭಾನುವಾರ ರಕ್ಷಿಸಿದರು.
ಸಮೀಪದ ಸತ್ತಿ ಗ್ರಾಮದ ಮನೋಜ ಗಂಗಪ್ಪನವರ ಅವರಿಗೆ ಸೇರಿದ ಎಮ್ಮೆಯನ್ನು ಕಾಳಜಿ ಕೇಂದ್ರಕ್ಕೆ ಕರೆತರುವಾಗ ದೊಡವಾಡ ರಸ್ತೆಯ ಬಳಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಯಿತು. ಅದೇ ಗ್ರಾಮದ ಆನಂದ ಚಿನಗುಂಡಿ ರಕ್ಷಣೆಗೆ ಮುಂದಾಗಿ, ಗ್ರಾಮದ ಕೆಲವರ ಸಹಾಯದಿಂದ ಹಗ್ಗ ಪಡೆದು ಎಮ್ಮೆಗೆ ಕಟ್ಟಿದ ಹಗ್ಗಕ್ಕೆ ಬಿಗಿದು ತಾನೂ ಹಿಡಿದುಕೊಂಡು ನೀರಿನಿಂದ ಮೇಲೆ ಬಂದರು.
ಮಲ್ಲು ಲೊಕೊಂಡೆ ಅವರ ಎಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.