ADVERTISEMENT

ಬೆಳಗಾವಿ: ‘ಕರಿಯರ್ ಪಾಯಿಂಟ್’ ಶಾಖೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 11:42 IST
Last Updated 1 ಸೆಪ್ಟೆಂಬರ್ 2021, 11:42 IST
ಬೆಳಗಾವಿಯ ತಿಲಕವಾಡಿಯ ಸೋಮವಾರ ಪೇಟೆಯಲ್ಲಿ ಆರಂಭಿಸಿರುವ ‘ಕರಿಯರ್ ಪಾಯಿಂಟ್‌’ ಶಾಖೆಯನ್ನು ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ ಉದ್ಘಾಟಿಸಿದರು
ಬೆಳಗಾವಿಯ ತಿಲಕವಾಡಿಯ ಸೋಮವಾರ ಪೇಟೆಯಲ್ಲಿ ಆರಂಭಿಸಿರುವ ‘ಕರಿಯರ್ ಪಾಯಿಂಟ್‌’ ಶಾಖೆಯನ್ನು ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ ಉದ್ಘಾಟಿಸಿದರು   

ಬೆಳಗಾವಿ: ರಾಜಸ್ಥಾನದ ಕೋಟಾದ ಪ್ರಮುಖ ಶಿಕ್ಷಣ ಸಂಸ್ಥೆಯಾದ ‘ಕರಿಯರ್ ಪಾಯಿಂಟ್‌’ ತನ್ನ ಹೊಸ ಶಾಖೆಯನ್ನು ಇಲ್ಲಿನ ತಿಲಕವಾಡಿಯ ಸೋಮವಾರಪೇಟೆಯಲ್ಲಿ ಆರಂಭಿಸಿದೆ. ಐಐಟಿ, ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದೆ.

ಶಾಖೆ ಉದ್ಘಾಟಿಸಿದ ಕಾಡಾ ಅಡಳಿತಾಧಿಕಾರಿ ಶಶಿಧರ ಕುರೇರ, ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ನಿಟ್ಟಿನಲ್ಲಿ ಈ ಶಾಖೆಯಿಂದ ಪ್ರಯೋಜನ ಪಡೆದುಕೊಳ್ಳಬೇಕು. ಉತ್ತಮ ತರಬೇತಿ ಪಡೆದು ಉನ್ನತ ಶಿಕ್ಷಣ ಹೊಂದಬೇಕು’ ಎಂದು ಸಲಹೆ ನೀಡಿದರು.

ಬೆಳಗಾವಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಸಿಪಿ ವಿಕ್ರಂ ಅಮಟೆ, ಶಿಕ್ಷಣ ತಜ್ಞ ರಾಜ್ ಬೆಳಗಾಂವಕರ, ಮುಖಂಡರಾದ ಡಾ.ರವಿ ಪಾಟೀಲ, ವೀರೇಶ ಕಿವಡಸಣ್ಣವರ, ಶಾಖೆಯ ನಿರ್ದೇಶಕ ಬಾಲಚಂದ್ರ ಬಾಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.