ADVERTISEMENT

ಬಸ್‌ ಹರಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 14:09 IST
Last Updated 12 ಡಿಸೆಂಬರ್ 2019, 14:09 IST

ಬೆಳಗಾವಿ: ತಾಲ್ಲೂಕಿನ ದೇಸೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸಾರಿಗೆ ಬಸ್‌ ಹರಿದು ಬಾಲಕ ಮೃತಪಟ್ಟನು.

ದೇಸೂರ ಗ್ರಾಮದ ಮಹ್ಮದ್‌ಗೌಸ್ ನಿಯಾಮತ್ ಚೌಧರಿ (9) ಮೃತ.

ಈತ ಕ್ಯಾಂಪ್‌ನ ಇಸ್ಲಾಮಿಯಾ ಶಾಲೆ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಬಸ್ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಅದೇ ಸಮಯಕ್ಕೆ ಚಾಲಕ ಬಸ್‌ ಚಲಾಯಿಸಿದ್ದರಿಂದ ಚಕ್ರ ವಿದ್ಯಾರ್ಥಿ ಮೇಲೆ ಹರಿದಿದೆ. ಬಾಲಕ ಬಿದ್ದಿದ್ದುದು ಚಾಲಕನಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.