ADVERTISEMENT

ಬಾಲ್ಯ ವಿವಾಹ: ಸೋದರತ್ತೆ ಮಗನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 20:28 IST
Last Updated 20 ಡಿಸೆಂಬರ್ 2020, 20:28 IST

ಗೋಕಾಕ(ಬೆಳಗಾವಿ): ತಾಲ್ಲೂಕಿನ ಕೊಣ್ಣೂರ ಪಟ್ಟಣದಲ್ಲಿ ಬಾಲಕಿಯ ವಿವಾಹವನ್ನು ಆಕೆಯ ಸಹೋದರನೇ ತಡೆದ ಪ್ರಕರಣ ಬೇರೊಂದು ತಿರುವು ಪಡೆದುಕೊಂಡಿದೆ.

ಬಾಲಕಿಯ ಸೋದರತ್ತೆಯ ಮಗ ಘಟಪ್ರಭಾದ ರಮೇಶ ಕೆಂಪಣ್ಣ ಮಾದಗಿಯೇ ಆಕೆಯನ್ನು ಅಪಹರಣ ಮಾಡಿದ್ದಾಗಿ ಬಾಲಕಿ ತಂದೆ ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಗ್ರಾಮದ ಮಲ್ಲೇಶಿ ಶಿವಗೊಂಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

18ರಂದು ನಡೆಯಲಿದ್ದ ಬಾಲ್ಯ ವಿವಾಹವನ್ನು ಬಾಲಕಿ ಸಹೋದರ ತಡೆದಿದ್ದಾಗಿ ಸುದ್ದಿ ಪ್ರಕಟವಾಗಿತ್ತು. ಬಾಲಕಿ ಈವರೆಗೆ ಪತ್ತೆಯಾಗಿಲ್ಲ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.