ADVERTISEMENT

ಕಸಾಪದಿಂದ ಸಾಧಕರ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2023, 13:52 IST
Last Updated 24 ಮೇ 2023, 13:52 IST

ಹುಕ್ಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲೂಕು ಘಟಕದಿಂದ ಸಾಹಿತ್ಯ, ಸಂಸ್ಕೃತಿ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರ ಮಾಹಿತಿಯನ್ನು  ಸಂಗ್ರಹಿಸಲಾಗುತ್ತಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿನ ಕವಿ, ಸಾಹಿತಿ, ಲೇಖಕರು, ಚಿಂತಕರು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಪೂರ್ಣ ಹೆಸರು, ವಿಳಾಸ, ಮೊ.ಸಂಖ್ಯೆ, ಭಾವಚಿತ್ರದೊಂದಿಗೆ ಸಂಕ್ಷಿಪ್ತ ಮಾಹಿತಿಯನ್ನು ಮೇ 31 ರೊಳಗಾಗಿ (ಸಂಕೇಶ್ವರ ಭಾಗದವರು) ಶಿವಾನಂದ ಗುಂಡಾಳಿ ಗೌ.ಕಾರ್ಯದರ್ಶಿ ಕಡೆಗೆ, (ಹುಕ್ಕೇರಿ ಭಾಗದವರು) ಎಂ.ಎಸ್‌.ಹೊಳಿಮಠ ಗೌ.ಕಾರ್ಯದರ್ಶಿ ಕಡೆಗೆ, (ಯಮಕನಮರಡಿ ಭಾಗದವರು) ಬಿ.ಬಿ.ಅಕ್ಕತಂಗೇರಹಾಳ ಅವರಿಗೆ ನೀಡಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊ. 9008908635, 9900319084 ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಅವಲಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.