ADVERTISEMENT

ಕಾಗವಾಡ: ಮೃತ ಬಾಲಕರ ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:01 IST
Last Updated 31 ಮೇ 2025, 16:01 IST
ಕಾಗವಾಡ ಸಮೀಪದ ನಾಗನೂರ ಪಿಎ ಗ್ರಾಮದ ಅಗ್ರಾಣಿ ಹಳ್ಳ ದಾಟುವ ವೇಳೆ ಮೃತರಾದ ಬಾಲಕರ ಕುಟುಂಬಕ್ಕೆ ಶಾಸಕ ರಾಜು ಕಾಗೆ ಪರಿಹಾರದ ಆದೇಶ ಪ್ರತಿ ವಿತರಣೆ ಮಾಡಿದರು
ಕಾಗವಾಡ ಸಮೀಪದ ನಾಗನೂರ ಪಿಎ ಗ್ರಾಮದ ಅಗ್ರಾಣಿ ಹಳ್ಳ ದಾಟುವ ವೇಳೆ ಮೃತರಾದ ಬಾಲಕರ ಕುಟುಂಬಕ್ಕೆ ಶಾಸಕ ರಾಜು ಕಾಗೆ ಪರಿಹಾರದ ಆದೇಶ ಪ್ರತಿ ವಿತರಣೆ ಮಾಡಿದರು   

ಕಾಗವಾಡ: ಅಥಣಿ ತಾಲ್ಲೂಕಿನ ನಾಗನೂರು ಪಿಎ ಗ್ರಾಮದ ಸಂಜಯ ಕಾಂಬಳೆ ಎಂಬುವವರ ಇಬ್ಬರು ಮಕ್ಕಳು ಅಗ್ರಾಣಿ ಹಳ್ಳ ದಾಟುವ ವೇಳೆ ಮೃತಪಟ್ಟಿದ್ದು, ಶನಿವಾರ ಅವರ ಕುಟುಂಬವನ್ನು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.

ಈ ದುರ್ಘಟನೆಯಲ್ಲಿ ನಾಗನೂರ ಪಿಎ ಗ್ರಾಮದ ಬಾಲಕರಾದ ಗಣೇಶ ಕಾಂಬಳೆ ಹಾಗೂ ದೀಪಕ ಕಾಂಬಳೆ ಇಬ್ಬರು ಮೃತಪಟ್ಟಿದ್ದರು. ಸಂಜಯಕಾಂಬಳೆಗೆ ಸೇರಿದ ಒಂದು ಎತ್ತು ಕೂಡ ಮೃತಪಟ್ಟಿತ್ತು. ಅವರ ಕುಟುಂಬಕ್ಕೆ ಸರ್ಕಾರದಿಂದ ₹ 10 ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ಕುಟುಂಬಕ್ಕೆ ಶಾಸಕ ರಾಜು ಕಾಗೆ ಹಸ್ತಾಂತರಿಸಿದರು.

‘ಇಂದೇ ಮೃತ ಕುಟುಂಬಕ್ಕೆ ಪರಿಹಾರದ ಹಣ ಅವರ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಈ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಲು ನಾನು, ತಹಶೀಲ್ದಾರ್‌, ಪೊಲೀಸ್ ಇಲಾಖೆ ಅಧಿಕಾರಿಗಳು ಹಲವು ಬಾರಿ ಗ್ರಾಮಸ್ಥರ ಮನವೊಲಿಸಲು ಮುಂದಾದರೂ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿಲ್ಲ. ಈ ಘಟನೆಗೆ ಗ್ರಾಮಸ್ಥರೇ ನೇರ ಕಾರಣ. ಈಗಲಾದರೂ ಗ್ರಾಮಸ್ಥರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು. 

ಈ ವೇಳೆ ತಹಶೀಲ್ದಾರ್‌ ಸಿದರಾಯ ಬೋಸಗಿ, ಪಂಚಾಯತ್‌ ರಾಜ್ ಎಇಇ ಈರಣ್ಣ ವಾಲಿ, ಮುಖಂಡರಾದ ವಿನಾಯಕ ಬಾಗಡಿ, ಖಂಡೇರಾವ ಘೋರ್ಪಡೆ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.