ADVERTISEMENT

ಬೆಳಗಾವಿ: ‘ಸಂವಿಧಾನ ಗೌರವ ಅಭಿಯಾನ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 14:00 IST
Last Updated 26 ನವೆಂಬರ್ 2021, 14:00 IST
ಬೆಳಗಾವಿಯಲ್ಲಿ ರಾಷ್ಟ್ರೀಯ ಸಂವಿಧಾನ ದಿನದ ಪ್ರಯುಕ್ತ ಬಿಜೆಪಿ ಪ.ಜಾತಿ ಮೋರ್ಚಾದಿಂದ ಹಮ್ಮಿಕೊಂಡಿರುವ ‘ಸಂವಿಧಾನ ಗೌರವ ಅಭಿಯಾನ’ಕ್ಕೆ  ಮುಖಂಡರು ಶುಕ್ರವಾರ ಚಾಲನೆ ನೀಡಿದರು
ಬೆಳಗಾವಿಯಲ್ಲಿ ರಾಷ್ಟ್ರೀಯ ಸಂವಿಧಾನ ದಿನದ ಪ್ರಯುಕ್ತ ಬಿಜೆಪಿ ಪ.ಜಾತಿ ಮೋರ್ಚಾದಿಂದ ಹಮ್ಮಿಕೊಂಡಿರುವ ‘ಸಂವಿಧಾನ ಗೌರವ ಅಭಿಯಾನ’ಕ್ಕೆ  ಮುಖಂಡರು ಶುಕ್ರವಾರ ಚಾಲನೆ ನೀಡಿದರು   

ಬೆಳಗಾವಿ: ರಾಷ್ಟ್ರೀಯ ಸಂವಿಧಾನ ದಿನದ ಪ್ರಯುಕ್ತ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ‘ಸಂವಿಧಾನ ಗೌರವ ಅಭಿಯಾನ’ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶುಕ್ರವಾರ ಚಾಲನೆ ನೀಡಲಾಯಿತು.

ನಂತರ ಹನುಮಾನ್‌ನಗರ ಗಾಜಿನ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.

ಸಂಸದೆ ಮಂಗಲಾ ಅಂಗಡಿ, ಪಕ್ಷದ ಮಹಾನಗರ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಪಮ್ಮಾರ, ಮಹಾನಗರ ಜಿಲ್ಲಾ ಪ್ರಭಾರಿ ರಮೇಶ್ ದೇಶಪಾಂಡೆ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ರಾಜ್ಯ ಘಟಕದ ಕಾರ್ಯದರ್ಶಿ ಉಜ್ವಲಾ ಬಡವನಾಚೆ ಮಾತನಾಡಿದರು.

ADVERTISEMENT

ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ರಾವ್ ಬಹದ್ದೂರ್ ಕದಂ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್, ಕೆಯುಡಬ್ಲ್ಯುಎಸ್‌ಎಸ್‌ಬಿ ನಿರ್ದೇಶಕಿ ದೀಪಾ ಕುಡಚಿ, ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಜಿಲ್ಲಾ ಘಟಕದ ಕಾರ್ಯದರ್ಶಿ ಮಹಾಂತೇಶ ವಕ್ಕುಂದ, ನಗರಪಾಲಿಕೆ ಸದಸ್ಯರಾದ ಸಂದೀಪ ಜಿರಗ್ಯಾಳ, ಶ್ರೀಶೈಲ್ ಕಾಂಬ್ಳೆ, ಸವಿತಾ ಕಾಂಬ್ಳೆ, ಮಹದೇವ ರಾಠೋಡ, ರೂಪಾ ಚಿಕ್ಕಲದಿನ್ನಿ, ಶ್ರೇಯಸ್ ನಾಕಾಡಿ, ರೇಷ್ಮಾ ಪಾಟೀಲ, ವೀಣಾ ವಿಜಾಪುರೆ, ಮಹಾನಗರ ಮಾಧ್ಯಮ ಪ್ರಮುಖ ಶರದ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.