ADVERTISEMENT

'ನಾಯಿ ಕಡಿದಿದೆ.. ದಯವಿಟ್ಟು ಬಿಡಿ’ ಗಮನ ಸೆಳೆದ ಫಲಕ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 14:46 IST
Last Updated 27 ಮಾರ್ಚ್ 2020, 14:46 IST
   

ಬೆಳಗಾವಿ: ‘ನಾಯಿ ಕಡಿದಿದೆ. ನಾವು ಆಸ್ಪತ್ರೆಗೆ ಹೋಗುತ್ತಿದ್ದೇವೆ, ದಯವಿಟ್ಟು ಬಿಡಿ’ ಎನ್ನುವ ಫಲಕ ಹಿಡಿದುಕೊಂಡು ಇಬ್ಬರು ಬೈಕ್‌ ಸವಾರರು ನಗರದಲ್ಲಿ ಸಂಚರಿಸಿರುವುದು ಗಮನ ಸೆಳೆಯಿತು.

ಇಲ್ಲಿನ ಬೋಗಾರ್‌ವೇಸ್‌ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಬೈಕ್‌ ಸವಾರರು ಫಲಕವನ್ನು ಹಿಡಿದುಕೊಂಡು ಸಾಗಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಪ್ರತಿಯೊಂದು ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸಂಚರಿಸುವವರ ಮೇಲೆ ಲಾಠಿ ಬೀಸುತ್ತಿದ್ದರು.

ಇದನ್ನು ತಪ್ಪಿಸಿಕೊಳ್ಳಲು ಇವರಿಬ್ಬರು ಈ ಫಲಕವನ್ನು ಹಿಡಿದುಕೊಂಡು ಸಾಗಿದರು. ಬೈಕ್‌ ಓಡಿಸುತ್ತಿದ್ದವನ ಬಲಗಾಲ ಮೇಲೆ ಗಾಯದ ಗುರುತು ಇದೆ. ಅವರ ಹೆಸರು ಪತ್ತೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.