ಭ್ರಷ್ಟಾಚಾರ
ಖಾನಾಪುರ(ಬೆಳಗಾವಿ ಜಿಲ್ಲೆ): ಜಮೀನಿಗೆ ಕಾಗದಪತ್ರ ಮಾಡಿಕೊಡಲು ₹4,500 ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಖಾನಾಪುರದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ತಾಲ್ಲೂಕು ಭೂಮಾಪಕ ವಿನೋದ ಸಂಬನ್ನಿ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
‘ಖಾನಾಪುರ ತಾಲ್ಲೂಕಿನ ಮಾನಸಾಪುರ ಗ್ರಾಮದ ಸದಾಶಿವ ಕಾಂಬಳೆ ಅವರು ತಮ್ಮ ಜಮೀನಿಗೆ ಕಾಗದಪತ್ರ ಮಾಡಿಕೊಡಲು ಕೋರಿದಾಗ, ವಿನೋದ ಸಂಬನ್ನಿ ಲಂಚ ಕೇಳಿದ್ದರು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿಎಸ್ಪಿ ಭರತ ಎಸ್.ಆರ್., ಇನ್ಸ್ಪೆಕ್ಟರ್ಗಳಾದ ಆರ್.ಎಲ್.ಧರ್ಮಟ್ಟಿ, ಸಂಗಮನಾಥ ಹೊಸಮನಿ ಮತ್ತು ತಂಡ ಕಾರ್ಯಾಚರಣೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.