ಸಾವಳಗಿ: ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದ ಹೊರವಲಯದ ಘಟಪ್ರಭಾ ನದಿಯ ದಡದ ಮೇಲಿನ ಬಾವಿಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಶಿವಲಿಂಗಪ್ಪ ಬಸವರಾಜ ಕೊಟಬಾಗಿ ಎಂಬುವರ ಪಾಳು ಬಾವಿಯಲ್ಲಿ ಮೊಸಳೆ ಮರಿ ಪ್ರತ್ಯಕವಾಗಿದೆ. ದೃಶ್ಯ ಮೊಸಳೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಇದು ಮರಿಯಾದ್ದರಿಂದ ತಾಯಿ ಮೊಸಳೆ ಕೂಡ ಇದೇ ಸ್ಥಳದಲ್ಲಿ ಇರಬಹುದು ಎಂಬ ಆತಂಕ ಎದುರಾಗಿದೆ.
2019ರಲ್ಲಿ ಘಟಪ್ರಭಾ ನದಿಗೆ ಬಂದ ಪ್ರವಾಹದ ಸಂದರ್ಭದಲ್ಲಿ ಮೊಸಳೆಗಳು ಈ ಭಾಗಕ್ಕೆ ಬಂದವು. ಆಗಿನಿಂದ ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡ ಮೊಸಳೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥ ಉಮೇಶ ನಂದಗಾಂವ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.