ADVERTISEMENT

4 ಕೈಗಾರಿಕಾ ಘಟಕ ಜ‍ಪ್ತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 14:29 IST
Last Updated 6 ನವೆಂಬರ್ 2020, 14:29 IST

ಬೆಳಗಾವಿ: ‘ರಾಜ್ಯ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ ನಿಯಮಗಳನ್ನು ಪಾಲಿಸದಿರುವ ಅಶೋಕ ಐರನ್ ವರ್ಕ್ಸ್‌ ಪ್ರೈ.ಲಿ.ಗೆ ಸಂಬಂಧಿಸಿದ ಮೂರು ಹಾಗೂ ಮಚ್ಚೆ ಗ್ರಾಮದಲ್ಲಿರುವ ಓಂ ಶ್ರೀ ಸರ್ವಿಸಿಂ‌ಗ್ ಸೆಂಟರ್‌ ಕೈಗಾರಿಕಾ ಘಟಕಗಳನ್ನು ಜಪ್ತಿ (ಸೀಜ್) ಮಾಡುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶಿಸಿದ್ದಾರೆ.

ಈ ಕೈಗಾರಿಕಾ ಘಟಕಗಳಲ್ಲಿ ನಿಯಮಗಳನ್ನು ಪಾಲಿಸದಿರುವುದರಿಂದ ತಕ್ಷಣವೇ ಸೀಜ್ ಮಾಡುವಂತೆ ಸೂಚಿಸಿದ್ದಾರೆ. ಪರಿಸರ ಅಧಿಕಾರಿಗಳು ಈ ಘಟಕಗಳನ್ನು ಪೊಲೀಸ್ ಭದ್ರತೆಯೊಂದಿಗೆ ಜಪ್ತಿ ಮಾಡಬೇಕು. ಮಾಲಿನ್ಯಕ್ಕೆ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯಕ್ಕೆ ಹಾನಿಯಾಗುವಂತಹ ರಾಸಾಯನಿಕಗಳು ಇದ್ದಲ್ಲಿ ಅವುಗಳನ್ನು ನಿಯಮಾನುಸಾರ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT