ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ 57 ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಹೊರತುಪಡಿಸಿ ಇನ್ನುಳಿದವರೆಲ್ಲರ ಠೇವಣಿ ಹಣ ಸರ್ಕಾರಕ್ಕೆ ಜಪ್ತಿಯಾಗಿದೆ.
ಕ್ಷೇತ್ರದಲ್ಲಿ ಒಟ್ಟು 17,71,829 ಮತದಾರರು ಇದ್ದಾರೆ. ಇವರ ಪೈಕಿ 11,94,909 ಜನರು ಮತ ಚಲಾಯಿಸಿದ್ದರು. ತಾವು ಕಟ್ಟಿದ ಠೇವಣಿ ಹಣ ವಾಪಸ್ ಪಡೆಯಬೇಕಾದರೆ ಅಭ್ಯರ್ಥಿಗಳು ಚಲಾವಣೆಯಾದ ಒಟ್ಟು ಮತಗಳ ಪೈಕಿ 1/6ರಷ್ಟು (1,99,151) ಮತಗಳನ್ನು ಪಡೆಯಬೇಕಾಗಿತ್ತು. ಈ ನಿಬಂಧನೆಯನ್ನು ವಿಜೇತ ಅಭ್ಯರ್ಥಿ ಬಿಜೆಪಿಯ ಸುರೇಶ ಅಂಗಡಿ ಹಾಗೂ ಪ್ರತಿಸ್ಪರ್ಧಿ ಕಾಂಗ್ರೆಸ್ನ ಡಾ.ವಿ.ಎಸ್. ಸಾಧುನವರ ಮಾತ್ರ ಪೂರೈಸಿದ್ದಾರೆ. ಇನ್ನುಳಿದ 55 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.