ADVERTISEMENT

ಅಥಣಿ: ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 16:34 IST
Last Updated 24 ಜೂನ್ 2021, 16:34 IST
ಅಥಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಪೂಜೆ ಸಲ್ಲಿಸಿ ಗುರುವಾರ ಚಾಲನೆ ನೀಡಿದರು
ಅಥಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಪೂಜೆ ಸಲ್ಲಿಸಿ ಗುರುವಾರ ಚಾಲನೆ ನೀಡಿದರು   

ಅಥಣಿ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಗುರುವಾರ ಚಾಲನೆ ನೀಡಿದರು.

‘₹ 50 ಲಕ್ಷ ವೆಚ್ಚದಲ್ಲಿ ರಾಘವೇಂದ್ರ ಮಠದ ಸಮುದಾಯ ಭವನ, ಮುರಗುಂಡಿ ಗ್ರಾಮದಲ್ಲಿ ₹ 65 ಲಕ್ಷ ಅನುದಾನದಲ್ಲಿ ಮುರಗುಂಡಿ-ತಂಗಡಿ ಗ್ರಾಮದ ರಸ್ತೆ, ನಂದೇಶ್ವರದಲ್ಲಿ ₹ 78 ಲಕ್ಷದಲ್ಲಿ ನಂದೇಶ್ವರ- ನಂದಗಾಂವ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಿವೆ. ತಾಲ್ಲೂಕಿನಲ್ಲಿ ಈಗಾಗಲೇ 10 ಸಮುದಾಯ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಸ್ಥಿತಿ ಸರಿ ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದಾರೆ. ಆದ್ದರಿಂದ, ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ’ ಎಂದರು.

ADVERTISEMENT

ಮುಖಂಡರಾದ ರಮೇಶಗೌಡಾ ಪಾಟೀಲ, ಅರವಿಂದರಾವ ದೇಶಪಾಂಡೆ, ಅನಿಲರಾವ ದೇಶಪಾಂಡೆ, ಮಹೇಶ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಅರ್ಜುನ ನಾಯಿಕ, ಅರುಣ ಯಲಗುದ್ರಿ, ಎಲ್.ವಿ. ಕುಲಕರ್ಣಿ, ರಾಜು ಗುಡೋಡಗಿ, ನೀರಾವರಿ ಇಲಾಖೆ ಅಧಿಕಾರಿಗಳಾದ ಬಿ.ಆರ್. ರಾಥೋಡ, ಕೆ.ಕೆ. ಜಾಲಿಬೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.