ADVERTISEMENT

ಬೆಳಗಾವಿ | ದೇಹ ದಾನ: ಸಾರ್ಥಕತೆ ಮೆರೆದ ವೈದ್ಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 10:50 IST
Last Updated 28 ಏಪ್ರಿಲ್ 2022, 10:50 IST
ಡಾ.ವಿಜಯಕುಮಾರ ಕೊಠಾವಳೆ
ಡಾ.ವಿಜಯಕುಮಾರ ಕೊಠಾವಳೆ   

ಬೆಳಗಾವಿ: ಇಲ್ಲಿನ ಟಿ.ವಿ. ಸೆಂಟರ್‌ನ ಬುಡಾ ಕಾಂಪ್ಲೆಕ್ಸ್ ಸಮೀಪದ ನಿವಾಸಿ, ಕೆಎಲ್‌ಇ ಪ್ರಭಾಕರ ಕೋರೆ ಆಸ್ಪತ್ರೆಯ ಗೌರವ ಸಂದರ್ಶಕ ಸಲಹೆಗಾರ ಡಾ.ವಿಜಯಕುಮಾರ ಶಂಕರರಾವ ಕೊಠಾವಳೆ (83) ಗುರುವಾರ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು. ಅವರು ದೇಹ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ದೇಹವನ್ನು ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಜೆಎನ್‌ಎಂಸಿಯ ಶರೀರ ರಚನಾ ವಿಭಾಗಕ್ಕೆ ದಾನ ಮಾಡಲಾಯಿತು. ವಿಭಾಗದ ಮುಖ್ಯಸ್ಥ ಡಾ.ಶಿಲ್ಪ ಭೀಮಳ್ಳಿ ಸ್ವೀಕರಿಸಿದರು. ಪ್ರಾಧ್ಯಾಪಕರಾದ ಡಾ.ವಿ.ಎಸ್. ಶಿರೋಳ, ಡಾ.ಎಸ್.ಪಿ. ದೇಸಾಯಿ, ಡಾ.ಆರ್.ಡಿ. ವಿರೂಪಾಕ್ಷಿ, ಡಾ.ಶೀತಲ್ ಪಟ್ಟಣಶೆಟ್ಟಿ, ಡಾ.ಸುಮಾ ಜ್ಞಾನೇಶ, ಡಾ.ಆಶಾ ಎಸ್. ಹಾಗೂ ಡಾ.ಮಹಾಂತೇಶ ರಾಮಣ್ಣವರ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.