ಹಂದಿಗುಂದ: ರಾಯಬಾಗ ತಾಲ್ಲೂಕಿನ ಸವಸುದ್ದಿಯಲ್ಲಿ ಮಹಾನವಮಿ ಅಂಗವಾಗಿ ದುರ್ಗಾ ಪರಮೇಶ್ವರಿ ಮೂರ್ತಿ ಮೆರವಣಿಗೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ಮನ ಸೆಳೆಯಿತು. ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಶಿವಯ್ಯ ಮಠಪತಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಪರಮಾನಂದವಾಡಿಯ ಬ್ರಹ್ಮಾನಂದ ಆಶ್ರಮದ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ತವಗ ಮಠದ ಬಾಳಯ್ಯ ಸ್ವಾಮೀಜಿ, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಸತ್ಯಗೌಡ ಪಾಟೀಲ, ಉಪಾಧ್ಯಕ್ಷ ರಮೇಶ ಮಾಂಗ, ಕಾರ್ಯದರ್ಶಿ ಕಾಂತೇಶ ಅಂಕಲೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಧರೆಪ್ಪ ಮುತ್ನಾಳ, ಅಜ್ಜಪ್ಪಗೌಡ ಪಾಟೀಲ, ಶ್ರೀಮಂತಗೌಡ ಪಾಟೀಲ, ನಿಂಗಯ್ಯ ಮಠಪತಿ, ರಾಮಣ್ಣ ನಾಯಕ, ನಾಗಪ್ಪ ನವಲಿಹಾಳ, ದಿಲೀಪ ಅಂಕಲೆ, ರಾಮನಗೌಡ ಪಾಟೀಲ, ರವಿ ದೇವರಮನಿ, ಮಂಜು ದೇವರಮನಿ, ಲಕ್ಷ್ಮಣ ಕೋಳಿಕಾರ, ಲಕ್ಷ್ಮಣ ಬೆಳಕುಡ, ಪ್ರಕಾಶ ಪೂಜಾರಿ, ಯಶವಂತ ಮಾಂಗ, ಶಿವಾನಂದ ಹಾದಿಮನಿ, ಸತ್ಯಪ್ಪ ಮಾಂಗ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.