ಬೆಳಗಾವಿ: ತಾಲ್ಲೂಕಿನ ಕೇದನೂರ ಗ್ರಾಮದ ರೈತ ಅಪ್ಪಯ್ಯ ನಾಗಪ್ಪ ರಾಜಾಯಿ (62) ಮರಕ್ಕೆ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಹೋದ ವರ್ಷ ನೆರೆಯಿಂದಾಗಿ ಬೆಳೆ ಹಾನಿ ಆಗಿತ್ತು. ಈ ವರ್ಷ ಕೋವಿಡ್–19 ಲಾಕ್ಡೌನ್ನಿಂದ ತರಕಾರಿಗಳನ್ನು ಸಮರ್ಪಕವಾಗಿ ಮಾರಲು ಆಗಲಿಲ್ಲ. ಬೆಲೆ ಕುಸಿತದಿಂದ ಆದಾಯ ಬರಲಿಲ್ಲ. ಹೀಗಾಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಕಾಕತಿ ಠಾಣೆ ಪೊಲೀಸರು ತಿಳಿಸಿದರು.
ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.