ADVERTISEMENT

ನಂದಿಕುರಳಿ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 16:21 IST
Last Updated 25 ಮಾರ್ಚ್ 2024, 16:21 IST

ರಾಯಬಾಗ: ತಾಲ್ಲೂಕಿನ ನಂದಿಕುರಳಿಯಲ್ಲಿ ಕ್ರಿಮಿನಾಶಕ ಸೇವಿಸಿ, ರೈತರೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಚಂದ್ರ ಬೇಡಕಿಹಾಳೆ(54) ಮೃತರು.

‘ನನ್ನ ಪತಿ ರಾಮಚಂದ್ರ ಸ್ಥಳೀಯ ಕೃಷಿಪತ್ತಿನ ಸಹಕಾರ ಬ್ಯಾಂಕ್‌ನಲ್ಲಿ ₹60 ಸಾವಿರ, ಕೆವಿಜಿ ಬ್ಯಾಂಕಿನ ಬೆಂಢವಾಡ ಶಾಖೆಯಲ್ಲಿ ₹1 ಲಕ್ಷ ಸಾಲ ಮತ್ತು ಬೇರೆಯವರ ಬಳಿ ₹4.32 ಲಕ್ಷ ಕೈಗಡ ಪಡೆದಿದ್ದರು. ಮಳೆ ಕೊರತೆಯಿಂದಾಗಿ ಫಸಲು ಬಾರದ್ದರಿಂದ ಖಿನ್ನತೆಗೆ ಒಳಗಾಗಿದ್ದರು’ ಎಂದು ಪತ್ನಿ ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ. ರಾಯಬಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.