ADVERTISEMENT

ಬಸವರಾಜ, ಸಿದ್ದುಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:06 IST
Last Updated 6 ಸೆಪ್ಟೆಂಬರ್ 2020, 16:06 IST
ಬೆಳಗಾವಿಯಲ್ಲಿ ಚಿತ್ರ ಕಲಾವಿದ ಸಿದ್ದು ಇಟಗಿ ಹಾಗೂ ಬಸವರಾಜ ಉಮರಾಣಿ (ಎಡದಿಂದ 2 ಹಾಗೂ 3ನೇಯವರು) ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಭೇಟಿಯಾದರು
ಬೆಳಗಾವಿಯಲ್ಲಿ ಚಿತ್ರ ಕಲಾವಿದ ಸಿದ್ದು ಇಟಗಿ ಹಾಗೂ ಬಸವರಾಜ ಉಮರಾಣಿ (ಎಡದಿಂದ 2 ಹಾಗೂ 3ನೇಯವರು) ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಭೇಟಿಯಾದರು   

ಬೆಳಗಾವಿ: ಅದ್ಭುತ ಸ್ಮರಣ ಶಕ್ತಿಗೆ ಹೆಸರಾಗಿರುವ ‘ನಡೆದಾಡುವ ಗಣಕ ಯಂತ್ರ’ ಎಂದೇ ಖ್ಯಾತರಾದ ಅಥಣಿ ತಾಲ್ಲೂಕಿನ ಬಸವರಾಜ ಉಮರಾಣಿ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಇಲ್ಲಿ ಸತ್ಕರಿಸಿದರು.

‘ಅವರು ದೃಷ್ಟಿದೋಷ ಹೊಂದಿದ್ದರೂ ತಮ್ಮ ಅತ್ಯುನ್ನತ ಬುದ್ದಿ ಸಂಪಾದನೆಯೊಂದಿಗೆ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಹೊರ ದೇಶಗಳಲ್ಲೂ ಪ್ರತಿಭೆ ಅನಾವರಣಗೊಳಿಸಿದ್ದಾರೆ. ದುಬೈಗೆ ಹೋಗಿ ಅಲ್ಲಿನ ರಾಜ ಶೇಖ್ ಮೊಹಮ್ಮದ್ ಅವರ ಮುಂದೆ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಹೆಮ್ಮೆಯ ವಿಷಯ’ ಎಂದರು.

ಕಲಾವಿದ ಸಿದ್ದು ಇಟಗಿ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಹೆಬ್ಬಾಳಕರ್ ಜನ್ಮ ದಿನಾಂಕದ ಮೂಲಕ ಕೆಲವೇ ಕ್ಷಣಗಳಲ್ಲಿ ಅವರ ಭಾವಚಿತ್ರ ರಚಿಸಿ ವಿಸ್ಮಯ ಮೂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.