ADVERTISEMENT

ಕೃಷ್ಣಾ ನದಿಗೆ ಮಹಾಪೂರ: ನಡುಗಡ್ಡೆಯಾದ ಮಾಂಗ್ ತೋಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:24 IST
Last Updated 10 ಸೆಪ್ಟೆಂಬರ್ 2019, 20:24 IST
ಅಥಣಿ ತಾಲ್ಲೂಕು ಹುಲಗಬಾಳಿ ಗ್ರಾಮದ ಮಾಂಗ್ ವಸತಿ ತೋಟ ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿದ್ದು, ಶಾಲಾ ಮಕ್ಕಳನ್ನು ಸ್ಥಳೀಯರೊಬ್ಬರು ಪ್ಲಾಸ್ಟಿಕ್‌ ಡ್ರಮ್‌ನಿಂದ ಸಿದ್ಧಪಡಿಸಿದ ತೆಪ್ಪದಲ್ಲಿ ದಾಟಿಸಿದರು
ಅಥಣಿ ತಾಲ್ಲೂಕು ಹುಲಗಬಾಳಿ ಗ್ರಾಮದ ಮಾಂಗ್ ವಸತಿ ತೋಟ ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿದ್ದು, ಶಾಲಾ ಮಕ್ಕಳನ್ನು ಸ್ಥಳೀಯರೊಬ್ಬರು ಪ್ಲಾಸ್ಟಿಕ್‌ ಡ್ರಮ್‌ನಿಂದ ಸಿದ್ಧಪಡಿಸಿದ ತೆಪ್ಪದಲ್ಲಿ ದಾಟಿಸಿದರು   

ಅಥಣಿ: ತಾಲ್ಲೂಕಿನಲ್ಲಿ ಈ ಬಾರಿ ಮತ್ತೊಮ್ಮೆ ಕೃಷ್ಣಾ ನದಿಗೆ ಮಹಾಪೂರ ಬಂದಿರುವುದರಿಂದ ತೀರದ ಗ್ರಾಮಗಳಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಪ್ರಾಣ ಭಯದಲ್ಲಿದ್ದಾರೆ.

ತಾಲ್ಲೂಕಿನ ಹುಲಗಬಾಳಿ ಗ್ರಾಮದ ಮಾಂಗ್ ವಸತಿ ತೋಟ ನಡುಗಡ್ಡೆಯಾಗಿದೆ. ಅಲ್ಲಿ 40 ಕುಟುಂಬಗಳಿವೆ. ಮಕ್ಕಳು ಪ್ರಾಣವನ್ನೇ ಪಣಕ್ಕಿಟ್ಟು ಪ್ಲಾಸ್ಟಿಕ್‌ ಡ್ರಮ್‌ನಿಂದ ಸಿದ್ಧಪಡಿಸಿದ ತೆಪ್ಪದಲ್ಲಿ ನೀರನ್ನು ದಾಟಿದರು. ಒಂದು ವಾರದಿಂದಲೂ ಅವರು ಹೀಗೆಯೇ ಶಾಲೆಗಳಿಗೆ ಹೋಗುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎನ್ನುವ ಪ್ರಶ್ನೆ ಸ್ಥಳೀಯರದಾಗಿದೆ.

ಎಲ್ಲ ಕುಟುಂಬಗಳನ್ನೂ ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಅವರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.