ಬೆಳಗಾವಿ: ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಕಿವಿಗೊಡದ ಹೋಟೆಲ್ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಮಹಾನಗರ ಪಾಲಿಕೆ ಶಾಕ್ ನೀಡಿದೆ. ಖಾನಾಪುರ ರಸ್ತೆಯ ಕೆಲವು ಹೋಟೆಲ್ಗಳಿಗೆ ಶನಿವಾರ ದಂಡ ವಿಧಿಸಿ, ಸುಮಾರು ₹ 12,500 ಸಂಗ್ರಹಿಸಿದೆ.
ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರ ಹೊರತಾಗಿಯೂ ಹೋಟೆಲ್ ತ್ಯಾಜ್ಯವನ್ನು ರಾತ್ರಿ ವೇಳೆ ರಸ್ತೆಯ ಮೇಲೆ ಸುರಿದು ಹೋಗುತ್ತಿದ್ದರು. ಇದನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು, ದಂಡ ವಿಧಿಸಿದರು.
ಐಎಕ್ಸ್ಜಿ ಬಾರ್ ಅಂಡ್ ರೆಸ್ಟೋರೆಂಟ್ಗೆ ₹ 2,000, ದತ್ತ ಭೇಲ್ವಾಲಾಗೆ ₹ 1,000, ನಿಗಪ್ಪ ತವಾರೆ ₹ 1,000, ಗುರುಕೃಪಾ ಹೋಟೆಲ್ಗೆ ₹ 2,000, ಧನಶ್ರೀ ಪಾನ್ ಶಾಪ್ ₹ 500, ಕೆ.ಎಂ. ಪುರೋಹಿತ ಸ್ವೀಟ್ಮಾರ್ಟ್ ₹ 2,000, ಹಣ್ಣಿನ ವ್ಯಾಪಾರಿ ಅಶೋಕಗೆ ₹ 2,000, ಲಸ್ಸಿ–ಕೆಫೆ ಹೋಟೆಲ್ಗೆ ₹ 2,000 ದಂಡ ವಿಧಿಸಲಾಗಿದೆ ಎಂದು ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.