ADVERTISEMENT

ಗೋಕಾಕ ಮಾದರಿ ತಾಲ್ಲೂಕಾಗಿಸುವೆ: ಸಚಿವ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 13:25 IST
Last Updated 7 ಜೂನ್ 2020, 13:25 IST
ಗೋಕಾಕ ತಾಲ್ಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಭಾನುವಾರ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು
ಗೋಕಾಕ ತಾಲ್ಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಭಾನುವಾರ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು   

ಗೋಕಾಕ: ‘ಪ್ರತಿ ಗ್ರಾಮದಲ್ಲೂ ಅಬಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ತಾಲ್ಲೂಕನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಮಕ್ಕಳಗೇರಿ ಮತ್ತು ಪುಡಕಲಕಟ್ಟಿ ಗ್ರಾಮಗಳಲ್ಲಿ ಭೂಸೇನಾ ನಿಗಮದಿಂದ ಕ್ರಮವಾಗಿ ₹ 15 ಲಕ್ಷ ಮತ್ತು ₹ 35 ಲಕ್ಷ ಅನುದಾನದಲ್ಲಿ ಕೈಗೊಂಡಿರುವ ಸಿ.ಸಿ. ರಸ್ತೆ ಹಾಗೂ ಭರಮ ದೇವರ ದೇವಸ್ಥಾನ ಅಬಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ನಮ್ಮ ಸರ್ಕಾರ ಅಭಿವೃದ್ಧಿಗೆ ಸದಾ ಆದ್ಯತೆ ನೀಡಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಕಾರಮ ಕಾಗಲ್ ಮತ್ತು ಮಡೆಪ್ಪ ತೋಳಿನವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ ಕರಿಗಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಭರಮಣ್ಣ ಮುತ್ತೆನ್ನವರ, ಎಸ್. ದಂಡಿನ, ಭೀಮಶಿ ಗೋರಬಾಳ, ರಾಮಚಂದ್ರ ದುರದುಂಡಿ, ಪುಂಡಲೀಕ ಕಾಗಲ, ಅಶೋಕ ಕಾಗಲ, ರಮೇಶ ಬಚ್ಚನವರ, ಲಕ್ಕಪ್ಪ ದುರದುಂಡಿ, ಪ್ರಕಾಶ ಕಿತ್ತೂರ, ವಿಠಲ ಬಚ್ಚನವರ, ಶಿವಪ್ಪ ಮೆಳವಂಕಿ, ಸೈಯದಹುಸೇನ ಹೂಲಿಕಟ್ಟಿ, ಮುದಕಪ್ಪ ಮೆಳವಂಕಿ, ಅಡಿವೆಪ್ಪ ತೋಳಿನ, ತುಕಾರಾಮ ಬಚ್ಚನವರ, ನಿಂಗಪ್ಪ ತೋಳಿವರ, ಶಿವಪುತ್ರ ದುರದುಂಡಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.