ADVERTISEMENT

ಹೃದಯಘಾತ: ಗೂಡ್ಸ್‌ ವಾಹನದ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:54 IST
Last Updated 10 ಜುಲೈ 2025, 2:54 IST
09-ಸವದತ್ತಿ-02: ಅಶೋಕ ಜೀರಿಗವಾಡ.
09-ಸವದತ್ತಿ-02: ಅಶೋಕ ಜೀರಿಗವಾಡ.   

ಸವದತ್ತಿ: ಎಪಿಎಂಸಿ ಆವರಣದಲ್ಲಿ ಸಾಮಾಗ್ರಿ ಸಾಗಿಸುವ ವಾಹನದ ಚಾಲಕ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ ಘಟನೆ ನಡೆದಿದೆ.

ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಅಶೋಕ ಜೀರಿಗವಾಡ (40) ಮೃತ ವ್ಯಕ್ತಿ. ಈತ ಸವದತ್ತಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಸರು ಕಾಳು ತಂದಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ತೀವ್ರ ಎದೆನೋವಿನಿಂದ ಕುಸಿದು ಬಿದ್ದು ಅಶೋಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT